
ಬೆಂಗಳೂರು (ನ.22): ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ರಾಸಲೀಲೆ ಸಿಡಿಯಲ್ಲಿದ್ದ ಸ್ವಾಮೀಜಿ ಬಂಡವಾಳ ಬಯಲಾಗಿದೆ. ಸುವರ್ಣ ನ್ಯೂಸ್ನಲ್ಲಿ Super Exclusive ಮಾಹಿತಿ ಇದೆ. ರಾಸಲೀಲೆ ಸಿಡಿಯಲ್ಲಿ ಇರೋದು ನಿತ್ಯಾನಂದ ಅನ್ನೋದು ಸಾಬೀತಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸ್ಪೋಟಕ ಸತ್ಯ ಬಹಿರಂಗವಾಗಿದೆ.
ಚಿತ್ರನಟಿಯೊಬ್ಬರ ಜೊತೆ ರಾಸಲೀಲೆ ನಡೆಸಿದ್ದ ನಿತ್ಯಾನಂದ ರಾಸಲೀಲೆ ವಿಡೀಯೋದಲ್ಲಿ ಇರೋದು ನಾನಲ್ಲ ಎಂದು ವಾದಿಸಿದ್ದ. ಗ್ರಾಫಿಕ್ಸ್ ಮೂಲಕ ನನ್ನ ಚಾರಿತ್ಯವಧೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದ. ತಜ್ಞರ ಅಭಿಪ್ರಾಯಕ್ಕಾಗಿ ಸಿಐಡಿ ತಂಡ ದೆಹಲಿ ವಿಧಿವಿಜ್ಞಾನ ಇಲಾಖೆಗೆ ಕಳುಹಿಸಿತ್ತು. ವೀಡಿಯೋ ಪರೀಕ್ಷಿಸಿ ತನಿಖೆ ನೀಡಿರುವ ದೆಹಲಿ ವಿಧಿವಿಜ್ಞಾನ ಇಲಾಖೆ ವಿಡಿಯೋದಲ್ಲಿ ಇರುವುದು ನಿತ್ಯಾನಂದ ಸ್ವಾಮಿಯೇ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ನಿತ್ಯಾ ರಾಸಲೀಲೆ ಸಂಬಂಧ ನೂರಾರು ಸಾಕ್ಷಿ ಕಲೆ ಹಾಕಿದ್ದ ಸಿಐಡಿ ತಂಡ ಅಂದಿನ ಸಿಐಡಿ ಡಿಐಜಿ ಚರಣ್ ರೆಡ್ಡಿ ದೆಹಲಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಪರೀಕ್ಷೆ ನಡೆಸಿದ ಎಫ್'ಎಸ್ಎಲ್ ದೃಢಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.