
5 ವರ್ಷ ಸ್ಪೀಕರ್ ಆಗಿ ಸುಗಮವಾಗಿ ಕಲಾಪ ನಡೆಸಿದ್ದ ಸುಮಿತ್ರಾ ಮಹಾಜನ್ ಅವರಿಗೆ ಈ ಬಾರಿ ಟಿಕೆಟ್ ನೀಡದೆ ಮನೆಯಲ್ಲಿ ಕೂರಿಸಲಾಗಿದೆ.
ಬಂಗಾಳದಲ್ಲಿ ದೀದಿಯನ್ನು ಹಿಂದಿಕ್ಕಿ 23 ಸೀಟು ಗೆಲ್ಲುತ್ತಾ ಬಿಜೆಪಿ?
ಹೀಗಿರುವಾಗ ಒಂದು ವೇಳೆ ಬಿಜೆಪಿ ಅಥವಾ ಬಿಜೆಪಿ ಮಿತ್ರರು ಸೇರಿ ಅಧಿಕಾರಕ್ಕೆ ಬಂದರೆ ಸ್ಪೀಕರ್ ಯಾರಾಗಬಹುದು ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ನಡೆಯುತ್ತಿದೆ. ಕೆಲವರು ನಿತಿನ್ ಗಡ್ಕರಿ ಹೆಸರು ಹೇಳುತ್ತಿದ್ದು, ಹೇಗೂ ಮೋದಿ ಮತ್ತು ಗಡ್ಕರಿ ನಡುವೆ ಸಂಬಂಧಗಳು ಕಿತ್ತುಹೋಗಿವೆ.
ಮೇ 23 ರ ನಂತರ ಬಿಜೆಪಿ ಸರ್ಕಾರ ಬಂದರೆ ಮಂತ್ರಿ ಆಗ್ತಾರಾ ಶೋಭಾ ಕರಂದ್ಲಾಜೆ?
ಎಲ್ಲ ಪಕ್ಷಗಳ ಜೊತೆ ಗಡ್ಕರಿ ಅವರ ಸಂಬಂಧ ಚೆನ್ನಾಗಿದೆ. ಹಾಗಾಗಿ ಅವರೇ ಆಗಬೇಕು ಎಂದು ಮೋದಿ ಹೇಳಿದರೂ ಆಶ್ಚರ್ಯ ಇಲ್ಲ. ಆದರೆ ಗಡ್ಕರಿ ಅವರಿಗೆ ಸರಸಂಘ ಚಾಲಕ ಭಾಗವತ್ ಅವರ ರಕ್ಷಣೆ ಇದೆ. ಯಾರೇ ಆಗಲಿ ಚರ್ಚೆಗಳಂತೂ ಜೋರಾಗಿ ನಡೆಯುತ್ತಿವೆ. ದಿಲ್ಲಿ ಎಂದ ಮೇಲೆ ಪಾಲಿಟಿಕ್ಸ್ ಚರ್ಚೆಗೆ ಬರವೇ?
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.