
ನವದೆಹಲಿ[ಆ.21]: ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರ ಒಳಗೊಂಡು 7 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿದೆ.
ಜಮ್ಮು-ಕಾಶ್ಮೀರ : ಸತ್ಯಪಾಲ್ ಮಲಿಕ್ ನೂತನ ರಾಜ್ಯಪಾಲರಾಗಿ ನೇಮಕ ಮಾಡಿದ್ದು ಇವರು ಬಿಹಾರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು. ಹಾಲಿ
ರಾಜ್ಯಪಾಲರಾಗಿದ್ದ ಎನ್ ಎನ್ ವ್ರೋಹ್ರ 2008ರಿಂದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು.
ಉತ್ತರಾಖಂಡ್ : ಉತ್ತರ ಪ್ರದೇಶದ ಹಿರಿಯ ರಾಜಕಾರಣಿ ಬೇಬಿರಾಣಿ ಮೌರ್ಯ ಅವರನ್ನು ನೇಮಕ ಮಾಡಲಾಗಿದೆ.
ಹರಿಯಾಣ: ಬಿಹಾರದ ಮಾಜಿ ಸಚಿವ ಎಸ್.ಎನ್.ಆರ್ಯ ಅವರ ನೇಮಕ
ಮೇಘಾಲಯ: ತ್ರಿಪುರದ ರಾಜ್ಯಪಾಲರಾದ ತಥಾಗತ್ ರಾಯ್ ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ಬಿಹಾರ: ಲಾಲಾಜಿ ಟಂಡನ್ ಅವರನ್ನು ನೇಮಿಸಲಾಗಿದ್ದು, ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸತ್ಯಪಾಲ್ ಮಲ್ಲಿಕ್ ಅವರನ್ನು ಜಮ್ಮು ಕಾಶ್ಮೀರಕ್ಕೆ
ವರ್ಗಾಯಿಸಲಾಗಿದೆ.
ಸಿಕ್ಕಿಂ: ಮೇಘಾಲಯದ ರಾಜ್ಯಪಾಲರಾದ ಗಂಗಾಪ್ರಸಾದ್ ಅವರನ್ನು ನೇಮಿಸಲಾಗಿದೆ. ಹಾಲಿ ರಾಜ್ಯಪಾಲ ಶ್ರೀನಿವಾಸ್ ಪಾಟೀಲ್ ಅವಧಿ ಅಂತ್ಯಗೊಂಡ
ಹಿನ್ನಲೆಯಲ್ಲಿ ನೇಮಕ ಮಾಡಲಾಗಿದೆ.
ತ್ರಿಪುರಾ: ಮೇಘಾಲಯದ ರಾಜ್ಯಪಾಲರಾದ ಕ್ಯಾಪ್ಟನ್ ಸಿಂಗ್ ಸೋಲಂಕಿ ಅವರನ್ನು ತ್ರಿಪುರಾಕ್ಕೆ ನೇಮಿಸಲಾಗಿದೆ. ಮೇಘಾಲಯಕ್ಕೆ ತಥಾಗತ್ ರಾಯ್
ಅವರನ್ನು ವರ್ಗಾಯಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.