ಕನ್ನಡಿಗರಿಗೆ ರಸಗುಲ್ಲಾ, ಸಮೋಸ ರುಚಿ ತೋರಿಸಿದ್ದ ಅಟಲ್

Published : Aug 21, 2018, 07:56 PM ISTUpdated : Sep 09, 2018, 09:31 PM IST
ಕನ್ನಡಿಗರಿಗೆ ರಸಗುಲ್ಲಾ, ಸಮೋಸ ರುಚಿ ತೋರಿಸಿದ್ದ ಅಟಲ್

ಸಾರಾಂಶ

ಪೂರ್ವ ನಿಗದಿತ ಅಲ್ಲದಿದ್ದರೂ ಕೂಡ ದೂರದ ರಾಜ್ಯದಿಂದ ಬಂದಿದ್ದ ಹುಡುಗರನ್ನು ಕೂರಿಸಿ ಸಮೋಸಾ, ರಸಗುಲ್ಲ, ಕಚೋರಿ ತಿನ್ನಿಸಿದ ಅಟಲ್ ಜಿ ಒಂದು ಗಂಟೆ ಕಾಲ ಕಾಶ್ಮೀರದ ಸ್ಥಿತಿ ಬಗ್ಗೆ ಮಾತನಾಡಿದರಂತೆ. 

ಒಮ್ಮೆ ಕರ್ನಾಟಕದ ಕೆಲ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಕಾಶ್ಮೀರ ಚಲೋ ಮುಗಿಸಿ ದಿಲ್ಲಿಗೆ ಬಂದಾಗ ರೈಸೀನಾ ರೋಡ್‌ನಲ್ಲಿರುವ ಅಟಲ್ ಜಿ ಮನೆಗೆ ಭೇಟಿಯಾಗಲು ಹೋದರಂತೆ. 
ಪೂರ್ವ ನಿಗದಿತ ಅಲ್ಲದಿದ್ದರೂ ಕೂಡ ದೂರದ ರಾಜ್ಯದಿಂದ ಬಂದಿದ್ದ ಹುಡುಗರನ್ನು ಕೂರಿಸಿ ಸಮೋಸಾ, ರಸಗುಲ್ಲ, ಕಚೋರಿ ತಿನ್ನಿಸಿದ ಅಟಲ್ ಜಿ ಒಂದು ಗಂಟೆ ಕಾಲ ಕಾಶ್ಮೀರದ ಸ್ಥಿತಿ ಬಗ್ಗೆ ಮಾತನಾಡಿದರಂತೆ. ನಂತರ ಕೊನೆಯಲ್ಲಿ ಕಾಶ್ಮೀರ ಕೋ ತೋ ನಿಪಟಲಿಯಾ ಸೋಚಾ ಹೋಗಾ ಅಟಲ್ ಕೋ ಭಿ ನಿಪಟಾಕೆ ಜಾಯೆಂಗೆ ಎಂದು ಹಾಸ್ಯ ಚಟಾಕಿ ಹಾರಿಸಿದರಂತೆ.

ಖೋದಾ ಪಹಾಡ್ ನಿಕಲಾ ಚೂಹಾ
ಒಮ್ಮೆ ಖ್ಯಾತ ಪತ್ರಕರ್ತ ರಜತ್ ಶರ್ಮ ಅಟಲ್ ಸರ್ಕಾರದ ಸಂಪುಟ ವಿಸ್ತರಣೆ ಕುರಿತು, ‘ಬೆಟ್ಟ ಅಗೆದು ಇಲಿ ಸಿಕ್ಕಂಗಾಯಿತು’ ಎಂದು
ಟೀವಿಯಲ್ಲಿ ಹೇಳಿದ್ದರಂತೆ. ಮರುದಿನ ಫೋನ್ ಮಾಡಿ ರಜತ್ ಶರ್ಮರಿಗೆ ಫೋನ್ ಮಾಡಿ ಮನೆಗೆ ಉಪಾಹಾರಕ್ಕೆ ಆಹ್ವಾನಿಸಿದ ಅಟಲ್ ಜಿ, ಪಂಡಿತ್ ಜಿ ಖೋದಾ ಪಹಾಡ್ ತೋ ಚೂಹಾ ತೋ ನಿಕಲಾ ಐಸಾ ತೋ ನಹೀ ಕಿ ಕುಚ್ ನಹೀ ನಿಕಲಾ ಎಂದು ಹೇಳಿ ಬಾಯಿ ತುಂಬಾ ನಕ್ಕರಂತೆ.

[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ]

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದಾಗಲೇ ಉದ್ಯಮಿಗೆ ಹಠಾತ್ ಹೃದಯಾಘಾತ: ಸಿಪಿಆರ್ ಮಾಡಿ ಜೀವ ಉಳಿಸಿದ ಯುವಕ
ಮಾಟ ಮಂತ್ರ ಪರಿಹಾರದ ನಾಟಕ: ಮಲ್ಲೇಶ್ವರಂನಲ್ಲಿ ಚಿನ್ನಾಭರಣ ದೋಚಿದ ನಕಲಿ ಸ್ವಾಮಿಗಳು!