ಮನ್ನಾರ್'ಗುಡಿ ಗ್ಯಾಂಗ್'ನಿಂದ ಜಯಲಲಿತಾರನ್ನು ಬಚಾವ್ ಮಾಡಿದ್ದರೇ ನರೇಂದ್ರ ಮೋದಿ?

Published : Dec 07, 2016, 08:50 AM ISTUpdated : Apr 11, 2018, 12:42 PM IST
ಮನ್ನಾರ್'ಗುಡಿ ಗ್ಯಾಂಗ್'ನಿಂದ ಜಯಲಲಿತಾರನ್ನು ಬಚಾವ್ ಮಾಡಿದ್ದರೇ ನರೇಂದ್ರ ಮೋದಿ?

ಸಾರಾಂಶ

ತಮಿಳುನಾಡಿನಲ್ಲಿ ಶಶಿಕಲಾ ಅಂಡ್ ಗ್ಯಾಂಗ್'ನ ಕಪಿಮುಷ್ಠಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಉದ್ಯಮಿಗಳು ಅಲ್ಲಿ ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆಂದು ಮೋದಿಯವರು 2011ರಲ್ಲಿ ಆಗಿನ ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ಮಾಹಿತಿ ನೀಡಿದ್ದರು.

ಚೆನ್ನೈ(ಡಿ. 07): ನರೇಂದ್ರ ಮೋದಿ ಮತ್ತು ಜಯಲಲಿತಾ ನಡುವೆ ಸ್ನೇಹ ಮತ್ತು ಬಾಂಧವ್ಯ ಇಂದು ನಿನ್ನೆಯದಲ್ಲ, ಎರಡು ದಶಕದ ಹಿಂದನದ್ದು. ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದಲೂ ಜಯಲಲಿತಾ ಜೊತೆ ವೈಯಕ್ತಿಕ ಸ್ನೇಹ ಇಟ್ಟುಕೊಂಡಿದ್ದರು. 2011ರಲ್ಲಿ ಶಶಿಕಲಾರನ್ನ ಪಕ್ಷದಿಂದ ಹಾಗೂ ತಮ್ಮ ನಿವಾಸದಿಂದ ಜಯಲಲಿತಾ ಹೊರಗೋಡಿಸಿದಾಗ ಮೋದಿಯವರ ಹೆಸರು ಥಳುಕು ಹಾಕಿಕೊಂಡಿತ್ತು.

ಜಯಾರನ್ನು ಎಚ್ಚರಿಸಿದ್ದ ಮೋದಿ:
ಮನ್ನಾರ್'ಗುಡಿ ಗ್ಯಾಂಗ್ ಎಂದೇ ಕುಖ್ಯಾತರಾಗಿರುವ ಶಶಿಕಲಾ ಮತ್ತವರ ಬಳಗವು ಜಯಲಲಿತಾ ಸುತ್ತಮುತ್ತ ಆಡಳಿತದ ಸಂಪೂರ್ಣ  ಹಿಡಿತ ಹೊಂದಿತ್ತು ಎಂಬ ಸುದ್ದಿ ಅನೇಕ ವರ್ಷಗಳಿಂದಲೂ ಇದೆ. ಜಯಲಲಿತಾ ಬರೇ ದಾಳದಂತಾಗಿದ್ದರೆನ್ನಲಾಗಿದೆ. ಮೋದಿಯವರು ಗುಜರಾತ್ ಸಿಎಂ ಆಗಿದ್ದಾಗ ಈ ಬಗ್ಗೆ ಜಯಲಲಿತಾರನ್ನು ಎಚ್ಚರಿದ್ದರು. ತಮಿಳುನಾಡಿನಲ್ಲಿ ಶಶಿಕಲಾ ಅಂಡ್ ಗ್ಯಾಂಗ್'ನ ಕಪಿಮುಷ್ಠಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಉದ್ಯಮಿಗಳು ಅಲ್ಲಿ ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆಂದು ಮೋದಿಯವರು 2011ರಲ್ಲಿ ಆಗಿನ ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ಮಾಹಿತಿ ನೀಡಿದ್ದರು. ಮೋದಿ ಸಲಹೆಯನ್ನು ಗ್ರಹಿಸಿದ ಜಯಲಲಿತಾ ತತ್'ಕ್ಷಣವೇ ಕಾರ್ಯಪ್ರವೃತ್ತರಾಗಿ ಮನ್ನಾರ್'ಗುಡಿ ಗ್ಯಾಂಗ್'ನವರನ್ನು ದೂರವಿಡಲು ಪ್ರಾರಂಭಿಸಿದರು. ಶಶಿಕಲಾ, ಆಕೆಯ ಗಂಡ, ಸೋದರ ಇತ್ಯಾದಿ ಮನ್ನಾರ್'ಗುಡಿಯ ಮುಖ್ಯ ಸದಸ್ಯರನ್ನು ಆಡಳಿತ ಆಯಕಟ್ಟಿನ ಸ್ಥಾನದಿಂದ ಕಿತ್ತುಹಾಕಿದರು. ಶಶಿಕಲಾಗೆ ನಿಷ್ಠರಾಗಿದ್ದ ಅಧಿಕಾರಿಗಳನ್ನು ಗುರುತಿಸಿ ಅವರನ್ನು ಉಚ್ಚಾಟಿಸುವ ಕೆಲಸ ಮಾಡಿದರು. ಇದೆಲ್ಲವೂ ಸಾಧ್ಯವಾಗಿದ್ದು ಮೋದಿಯವರ ಸಲಹೆಯಿಂದಾಗಿಯೇ.

ಆದರೆ, ಅದೇನಾಯಿತೋ ಗೊತ್ತಿಲ್ಲ, ಇತ್ತೀಚೆಗಷ್ಟೇ ಜಯಲಲಿತಾ ಮತ್ತೊಮ್ಮೆ ಶಶಿಕಲಾ ಸಖ್ಯಕ್ಕೆ ಬಿದ್ದರು. ಕಾಕತಾಳೀಯವೆಂಬಂತೆ, ಈ ಜಯಲಲಿತಾ ಕಥೆ ಈಗ ದುರಂತ ಅಂತ್ಯ ಕಂಡಿರುವುದು ದುರದೃಷ್ಟಕರವೇ ಸರಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

70ರ ಹರೆಯದಲ್ಲಿ ಸಿಕ್ಕಿಂ ಸುಂದರಿಗೆ ಮನಸೋತ ಆನಂದ್ ಮಹೀಂದ್ರ,ಅವಳಂದಕ್ಕೆ ಕಳೆದುಹೋಗ್ತೀರಿ
ಬೆಂಗಳೂರು ಕೇಂದ್ರದಲ್ಲಿ ಏರ್‌ಟ್ಯಾಕ್ಸಿ ಪರೀಕ್ಷೆ ಆರಂಭಿಸಿದ ಸರ್ಲಾ ಏವಿಯೇಷನ್‌, 2028ಕ್ಕೆ ಲಾಂಚ್‌