ರಫೆಲ್ ಡೀಲ್'ನಲ್ಲಿ ಪ್ರಧಾನಿ ಚೌಕಿದಾರ ಅಲ್ಲ ಪಾಲುದಾರ

Published : Aug 18, 2018, 06:18 PM ISTUpdated : Sep 09, 2018, 10:05 PM IST
ರಫೆಲ್ ಡೀಲ್'ನಲ್ಲಿ ಪ್ರಧಾನಿ ಚೌಕಿದಾರ ಅಲ್ಲ ಪಾಲುದಾರ

ಸಾರಾಂಶ

ಡೀಲ್'ನಲ್ಲಿ  40 ಸಾವಿರ ಕೋಟಿ ರೂ. ನಷ್ಟವಾಗಿದೆ.  30 ಸಾವಿರ ಕೋಟಿ ರೂ. ವ್ಯಾಪಾರದ ವಹಿವಾಟನ್ನು  ಅಂಬಾನಿ ಕಂಪನಿಗೆ ನೀಡಲಾಗಿದೆ. ರಾಜ್ಯದ ಹೆಚ್ಎಎಲ್ ಗೆ ಸಿಗಬೇಕಿದ್ದ ಕೆಲಸದ ಆದೇಶ  ಕೈತಪ್ಪಿ ಅಂಬಾನಿ ಕಂಪನಿ ಪಾಲಾಗಿದೆ

ನವದೆಹಲಿ[ಆ.18]: ರಫೇಲ್ ಡೀಲ್'ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚೌಕಿದಾರ್ ಅಲ್ಲ ಪಾಲುದಾರರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಫೆಲ್ ಡೀಲ್ ನಲ್ಲಿ ಪ್ರಧಾನ ಮಂತ್ರಿ ಪಾತ್ರ ಇದೆ. 40 ಸಾವಿರ ಕೋಟಿ ರೂ. ನಷ್ಟವಾಗಿದೆ. 30 ಸಾವಿರ ಕೋಟಿ ರೂ. ಅನಿಲ್‌ ಅಂಬಾನಿ ಕಂಪನಿಗೆ ನೀಡಲಾಗಿದೆ. ರಾಜ್ಯದ ಹೆಚ್ಎಎಲ್ ಗೆ ಸಿಗಬೇಕಿದ್ದ ಕೆಲಸದ ಆದೇಶ  ಕೈತಪ್ಪಿ ಅಂಬಾನಿ ಕಂಪನಿ ಪಾಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಫೇಲ್ ಡೀಲ್'ನಲ್ಲಿ ಸಾಕಷ್ಟು ಭ್ರಷ್ಟಚಾರ ನಡೆದಿದೆ. ರಫೆಲ್ ಡೀಲ್ ತನಿಖೆ ನಡೆಸಬೇಕು. ಭ್ರಷ್ಟಾಚಾರ ಖರೀದಿಯಲ್ಲಿ ಸಾಕಷ್ಟು ಲೋಪ‌ದೋಷಗಳಿವೆ. ಪ್ರಧಾನಿ ಮೋದಿ ಅವರು ಯಾರಿಗೂ ಗೊತ್ತಿಲ್ಲದೇ ಫ್ರಾನ್ಸ್ ನಲ್ಲಿ ಖರೀದಿಸಿಕೊಂಡು ಬಂದಿದ್ದಾರೆ. ಈ ಕಾರಣಕ್ಕಾಗಿ ಮೂವರು ರಕ್ಷಣಾ ಸಚಿವರನ್ನು ಬದಲಾಯಿಸಲಾಗಿದೆ. ಸದ್ಯ ತನ್ನ ಮಾತು ಕೇಳುವ ಒಬ್ಬರನ್ನು ರಕ್ಷಣಾ ಸಚಿವರಾಗಿ ನೇಮಿಸಿಕೊಂಡಿದ್ದು, ಡೀಲ್'ನಲ್ಲಿ ಪ್ರಧಾನಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯತ್ನಾಳ್ ಭಾಷಣಕ್ಕೆ ಟಾಂಗ್ ಕೊಡಲು ಹೋಗಿ ಯಡವಟ್ಟು ಮಾಡಿಕೊಂಡ ಸಚಿವ ಸಂತೋಷ್ ಲಾಡ್!
ಸವಣೂರು ಘಟನೆ ಕಾಂಗ್ರೆಸ್ ಓಲೈಕೆ ರಾಜಕಾರಣದ ಪ್ರತಿಬಿಂಬ, ರಾಜ್ಯದಲ್ಲಿ ಪೊಲೀಸರ ನಿಷ್ಕ್ರಿಯತೆ ಬಗ್ಗೆಯೂ ಸಂಸದ ಬೊಮ್ಮಾಯಿ ಕಿಡಿ