
ತಿರುವನಂತಪುರಂ(ಆ.18): ಜಲ ಪ್ರವಾಹಕ್ಕೆ ಕೇರಳ ತತ್ತರಿಸಿ ಹೋಗಿದೆ. ರಕ್ಷಣಾ ಕಾರ್ಯಗಳು ಭರದಿಂದ ಸಾಗಿದೆ. ದುರದೃಷ್ಟ ಅಂದರೆ ಭಾರಿ ಮಳೆ ಇನ್ನು ನಿಂತಿಲ್ಲ. ಹೀಗಾಗಿ ಕೇರಳ ಸಹಜ ಸ್ಥಿತಿಗೆ ಮರಳು ಕನಿಷ್ಠ ಒಂದು ತಿಂಗಳ ಅವಶ್ಯಕತೆ ಇದೆ. ಹೀಗಾಗಿ ರಾಜ್ಯದ ಓಣಂ ಹಬ್ಬವನ್ನ ಈ ಬಾರಿ ರದ್ದುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಓಣಂ ಹಬ್ಬ ಆಚರಣೆ ಹಣವನ್ನ ಪ್ರವಾಹ ಪರಿಹಾರಕ್ಕಾಗಿ ಉಪಯೋಗಿಸಲಾಗುವುದು. ಓಣಂ ಹಬ್ಬದ ಆಚರಣೆ, ವಿಶೇಷ ಕಾರ್ಯಕ್ರಮಗಳಿಗೆ ಸರ್ಕಾರ ನಿಗಧಿಪಡಿಸಿದ್ದ ಹಣವನ್ನ ಪರಿಹಾರ ಕಾರ್ಯಕ್ಕೆ ವಿನಿಯೋಗಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಇದೇ ಆಗಸ್ಟ್ 25 ರಂದು ಕೇರಳ ಹಾಗೂ ಕೇರಳಿಗರಿಗೆ ಓಣಂ ಹಬ್ಬ. ಆದರೆ ಈ ಬಾರಿ ಭಾರಿ ಮಳೆ ಹಾಗೂ ಜಲಪ್ರವಾಹಕ್ಕೆ ಜನರ ಬದುಕು ಹೈರಾಣಾಗಿದೆ. ಜನರೂ ಕೂಡ ಓಣಂ ಹಬ್ಬ ಆಚರಿಸೋ ಪರಿಸ್ಥಿತಿಯಲ್ಲಿ ಇಲ್ಲ. ಕೇರಳ ಪ್ರವಾಹ ಹರಿಹಾರಕ್ಕೆ ಕೇಂದ್ರ ಸರ್ಕಾರ 500 ಕೋಟಿ ರೂಪಾಯಿ ಘೋಷಿಸಿದೆ. ತಕ್ಷಣವೇ ಕೇರಳ ಪರಿಸ್ಥಿತಿ ಹತೋಟಿಗೆ ಬರಲಿ ಅನ್ನೋದೆ ಎಲ್ಲರ ಹಾರೈಕೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ