
ಬೆಂಗಳೂರು (ಮೇ.17): ರಾಜ್ಯ ಸರ್ಕಾರದ ಹಣದ ಹೊರೆಯನ್ನ ಇಳಿಸಲು ಮೆಟ್ರೋ ನಿಗಮ ಈಗ ಹೊಸದೊಂದು ಪ್ಲಾನ್ ರೆಡಿ ಮಾಡಿದೆ. ಮೆಟ್ರೋ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಸಾವಿರಾರೂ ಕೋಟಿ ರೂಪಾಯಿ , ಕೆಲವರ ಕೆಂಗಣ್ಣಿಗೆ ಗುರಿಯಾಗಿದು ಸಾಕಷ್ಟು ಆಕ್ಷೇಪಗಳು ಬರುತ್ತಿವೆ. ಹೀಗಾಗಿ ಈಗ ಮೆಟ್ರೋ ನಿಗಮ ತನ್ನ ಕಾಮಗಾರಿ ವೆಚ್ಚವನ್ನ, ತಾನೇ ಭರಿಸುವ ಪ್ಲಾನ್ವೊಂದನ್ನ ಸಿದ್ಧಮಾಡಿಕೊಂಡಿದೆ.
ಈಗಾಗಲೇ ನಿರ್ಮಾಣವಾಗಿರುವ ಮೆಟ್ರೋ ನಿಲ್ದಾಣಗಳಿಗೆ ತಗುಲಿದ ವೆಚ್ಚವನ್ನು , ಖಾಸಗಿ ವ್ಯಕ್ತಿ ಅಥವಾ ಕಂಪನಿಗಳ ಭರಿಸಿದರೆ ಅವರ ಹೆಸರನ್ನು ಆಯ್ದ ಮೆಟ್ರೋ ನಿಲ್ದಾಣಗಳಿಗೆ ಹೆಸರಿಡಲಾಗುವುದು. ಒಂದು ಮೆಟ್ರೋ ನಿಲ್ದಾಣ ನಿರ್ಮಾಣವಾಗಬೇಕಾದರೆ ನೂರಾರೂ ಕೋಟಿ ರೂಪಾಯಿ ವೆಚ್ಚವಾಗುತ್ತದೆ, ಒಂದು ವೇಳೆ ಆ ವೆಚ್ಚವನ್ನ ಯಾವುದಾದರೂ ಕಂಪನಿ, ಖಾಸಗಿ ವ್ಯಕ್ತಿ ಭರಿಸಿದರೆ ಮೆಟ್ರೋ ನಿಲ್ದಾಣಕ್ಕೆ ಅವರ ಹೆಸರಿಡಲಾಗುವುದು. ಈ ರೀತಿ ಮಾಡುವುದರಿಂದ ಮೆಟ್ರೋ ನಿಗಮಕ್ಕೆ ಸಾವಿರಾರು ರೂ ಕೋಟಿ ಹಣ ಬರುವುದು. ಮುಂದಿನ ಕಾಮಗಾರಿಗೆ ಸಹಾಯಕವಾಗಲಿದೆಯಂತೆ. ಅಷ್ಟೇ ಅಲ್ಲದೆ ಸರ್ಕಾರ ಮೆಟ್ರೋ ನಿಗಮಕ್ಕೆ ನೀಡುತ್ತಿರುವ ಅನುದಾನದ ಭಾರ ಕೂಡಾ ಕಡಿಮೆಯಾಗಲಿದೆ ಎಂದು ಮೆಟ್ರೋ ಎಂ.ಡಿ ಪ್ರದೀಪ್ ಸಿಂಗ್ ಖರೋಲಾ ಸುವರ್ಣನ್ಯೂಸ್ಗೆ ತಿಳಿಸಿದ್ದಾರೆ .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.