
ನವದೆಹಲಿ (ಏ.21):ಮುಸ್ಲೀಂಮರು ಬಿಜೆಪಿಗೆ ವೋಟ್ ನೀಡದೇ ಇದ್ದರೂ ನಾವು ಅವರಿಗೆ ಮಾನ್ಯತೆ ನೀಡಿದ್ದೇವೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.
ಮುಸ್ಲೀಂ ಪ್ರಾಬಲ್ಯವುಳ್ಳ ಸಾಕಷ್ಟು ಹಳ್ಳಿಗಳಿಗೆ ಸಚಿವ ರವಿ ಶಂಕರ್ ಪ್ರಸಾದ್ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ನೋಡಿ ಈ ಮಾತನ್ನು ಹೇಳಿದ್ದಾರೆ. ಹೆಚ್ಚಿನ ಮುಸಲ್ಮಾನ ಯುವಕರು ಸರ್ವಿಸ್ ಸೆಂಟರ್ ಗಳತ್ತ ಹೋಗುತ್ತಿದ್ದು, ಇಂಟರ್'ನೆಟ್ ಮೂಲಕ ಜನರಿಗೆ ಸರ್ಕಾರದ ಸೇವೆಗಳು ಲಭ್ಯವಾಗುವಂತೆ ಸಹಾಯ ಮಾಡುತ್ತಿದ್ದಾರೆ ಎಂದಿದ್ದಾರೆ.
ನಾವು ದೇಶವನ್ನು ಆಳುತ್ತಿದ್ದೇವೆ. 13 ಮಂದಿ ಮುಖ್ಯಮಂತ್ರಿಗಳನ್ನು ಹೊಂದಿದ್ದೇವೆ. ಸೇವಾಕ್ಷೇತ್ರ ಅಥವಾ ಕೈಗಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುವ ಮುಸ್ಲೀಂ ವ್ಯಕ್ತಿಯನ್ನು ನಾವು ಬಲಿಪಶು ಮಾಡಿದ್ದೇವಾ? ಅವರನ್ನು ಕೆಲಸದಿಂದ ತೆಗೆದು ಹಾಕಿದ್ದೇವಾ? ನಾವು ಮುಸ್ಲೀಂ ಮತವನ್ನು ಪಡೆಯದೇ ಇದ್ದರೂ ನಾವು ಅವರಿಗೆ ಗೌರವವನ್ನು ನೀಡಿದ್ದೇವೆ ಎಂದು ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.