ಒವೈಸಿ ಮಸೀದಿ ಹೇಳಿಕೆ ಖಂಡಿಸಿದ ಸಚಿವ ನಖ್ವಿ!

By Web DeskFirst Published Jun 1, 2019, 7:37 PM IST
Highlights

ಅಸದುದ್ದೀನ್ ಹೇಳಿಕೆ ಖಂಡಿಸಿದ ಅಲ್ಪಸಂಖ್ಯಾತ ಕಲ್ಯಾಣ ಸಚಿವ| ಒವೈಸಿ ಧರ್ಮಾಧಾರಿತ ರಾಜಕಾರಣ ಮಾಡುತ್ತಾರೆ ಎಂದ ಮುಖ್ತಾರ್ ಅಬ್ಬಾಸ್ ನಖ್ವಿ| ‘ಮುಸ್ಲಿಂ ಭಾಂಧವರು ಮಸೀದಿಗಳಿಗೆ ಭೇಟಿ ನೀಡದಂತೆ ಯಾರೂ ತಡೆದಿಲ್ಲ’| ‘ಮೋದಿ ಈ ದೇಶದ 130 ಕೋಟಿ ಜನರ ಆಶೀರ್ವಾದದಿಂದ ಪ್ರಧಾನಿಯಾಗಿದ್ದಾರೆ’|

ನವದೆಹಲಿ(ಜೂ.01): ಎಐಎಂಐಎಂ ಮುಖ್ಯಸ್ಥ, ಸಂಸದ ಅಸದುದ್ದೀನ್ ಒವೈಸಿ ಅವರ ಮಸೀದಿ ಭೇಟಿ ಹೇಳಿಕೆಯನ್ನು ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಖಂಡಿಸಿದ್ದಾರೆ.

ಒವೈಸಿ ಯಾವಾಗಲೂ ಧರ್ಮಾಧಾರಿತ ರಾಜಕಾರಣ ಮಾಡುತ್ತಾರೆ ಎಂದು ಹರಿಹಾಯ್ದಿರುವ ನಖ್ವಿ, ಈ ದೇಶದ ಮುಸ್ಲಿಂ ಭಾಂಧವರು ಮಸೀದಿಗಳಿಗೆ ಭೇಟಿ ನೀಡದಂತೆ ಯಾರೂ ತಡೆದಿಲ್ಲ ಎಂದು ಹೇಳಿದ್ದಾರೆ.

ಬೇಡದ ವಿಷಯಗಳ ಕುರಿತು ರಾಜಕಾರಣ ಮಾಡುವ ಒವೈಸಿ, ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯಲು ಪ್ರಯತ್ನಿಸುತ್ತಾರೆ ಎಂದು ನಖ್ವಿ ಕಿಡಿಕಾರಿದ್ದಾರೆ.

Minority Affairs Min MA Naqvi on Asaduddin Owaisi's remarks: Yeh jo secularism ke siyaasi soorma hain, inhone desh ke alpsankhyako, vishesh taur se musalmaano ko kirayedaar bana rakha tha, hissedaar nahi banaya tha. Modi ji ne desh ke 130 crore logon ko vikas ka hissedaar banaya. pic.twitter.com/xxHiVUHvXx

— ANI (@ANI)

ಮೋದಿ ಈ ದೇಶದ 130 ಕೋಟಿ ಜನರ ಆಶೀರ್ವಾದದಿಂದ ಪ್ರಧಾನಿಯಾಗಿದ್ದು, ಧರ್ಮ, ಜಾತಿ ಮೀರಿದ ವ್ಯಕ್ತಿತ್ವ ಹೊಂದಿದ್ದಾರೆ ಎಂದು ನಖ್ವಿ ಅಭಿಪ್ರಾಯಪಟ್ಟಿದ್ದಾರೆ.

ಹೈದರಾಬಾದ್ನಲ್ಲಿ ಮಾತನಾಡಿದ್ದ ಅಸದುದ್ದೀನ್ ಒವೈಸಿ, ಪ್ರಧಾನಿ ಮೋದಿ ಮಂದಿರಗಳಿಗೆ ಭೇಟಿ ನೀಡಬಹುದಾದರೆ ಈ ದೇಶದ ಮುಸ್ಲಿಮರು ಮಸೀದಿಗಳಿಗೆ ಭೇಟಿ ನೀಡುವ ಹಕ್ಕನ್ನು ಸಂವಿಧಾನ ನೀಡಿದೆ ಎಂದು ಹೇಳಿದ್ದರು.

click me!