ಒವೈಸಿ ಮಸೀದಿ ಹೇಳಿಕೆ ಖಂಡಿಸಿದ ಸಚಿವ ನಖ್ವಿ!

Published : Jun 01, 2019, 07:37 PM IST
ಒವೈಸಿ ಮಸೀದಿ ಹೇಳಿಕೆ ಖಂಡಿಸಿದ ಸಚಿವ ನಖ್ವಿ!

ಸಾರಾಂಶ

ಅಸದುದ್ದೀನ್ ಹೇಳಿಕೆ ಖಂಡಿಸಿದ ಅಲ್ಪಸಂಖ್ಯಾತ ಕಲ್ಯಾಣ ಸಚಿವ| ಒವೈಸಿ ಧರ್ಮಾಧಾರಿತ ರಾಜಕಾರಣ ಮಾಡುತ್ತಾರೆ ಎಂದ ಮುಖ್ತಾರ್ ಅಬ್ಬಾಸ್ ನಖ್ವಿ| ‘ಮುಸ್ಲಿಂ ಭಾಂಧವರು ಮಸೀದಿಗಳಿಗೆ ಭೇಟಿ ನೀಡದಂತೆ ಯಾರೂ ತಡೆದಿಲ್ಲ’| ‘ಮೋದಿ ಈ ದೇಶದ 130 ಕೋಟಿ ಜನರ ಆಶೀರ್ವಾದದಿಂದ ಪ್ರಧಾನಿಯಾಗಿದ್ದಾರೆ’|

ನವದೆಹಲಿ(ಜೂ.01): ಎಐಎಂಐಎಂ ಮುಖ್ಯಸ್ಥ, ಸಂಸದ ಅಸದುದ್ದೀನ್ ಒವೈಸಿ ಅವರ ಮಸೀದಿ ಭೇಟಿ ಹೇಳಿಕೆಯನ್ನು ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಖಂಡಿಸಿದ್ದಾರೆ.

ಒವೈಸಿ ಯಾವಾಗಲೂ ಧರ್ಮಾಧಾರಿತ ರಾಜಕಾರಣ ಮಾಡುತ್ತಾರೆ ಎಂದು ಹರಿಹಾಯ್ದಿರುವ ನಖ್ವಿ, ಈ ದೇಶದ ಮುಸ್ಲಿಂ ಭಾಂಧವರು ಮಸೀದಿಗಳಿಗೆ ಭೇಟಿ ನೀಡದಂತೆ ಯಾರೂ ತಡೆದಿಲ್ಲ ಎಂದು ಹೇಳಿದ್ದಾರೆ.

ಬೇಡದ ವಿಷಯಗಳ ಕುರಿತು ರಾಜಕಾರಣ ಮಾಡುವ ಒವೈಸಿ, ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯಲು ಪ್ರಯತ್ನಿಸುತ್ತಾರೆ ಎಂದು ನಖ್ವಿ ಕಿಡಿಕಾರಿದ್ದಾರೆ.

ಮೋದಿ ಈ ದೇಶದ 130 ಕೋಟಿ ಜನರ ಆಶೀರ್ವಾದದಿಂದ ಪ್ರಧಾನಿಯಾಗಿದ್ದು, ಧರ್ಮ, ಜಾತಿ ಮೀರಿದ ವ್ಯಕ್ತಿತ್ವ ಹೊಂದಿದ್ದಾರೆ ಎಂದು ನಖ್ವಿ ಅಭಿಪ್ರಾಯಪಟ್ಟಿದ್ದಾರೆ.

ಹೈದರಾಬಾದ್ನಲ್ಲಿ ಮಾತನಾಡಿದ್ದ ಅಸದುದ್ದೀನ್ ಒವೈಸಿ, ಪ್ರಧಾನಿ ಮೋದಿ ಮಂದಿರಗಳಿಗೆ ಭೇಟಿ ನೀಡಬಹುದಾದರೆ ಈ ದೇಶದ ಮುಸ್ಲಿಮರು ಮಸೀದಿಗಳಿಗೆ ಭೇಟಿ ನೀಡುವ ಹಕ್ಕನ್ನು ಸಂವಿಧಾನ ನೀಡಿದೆ ಎಂದು ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
India Latest News Live:ಇಂಡಿಗೋ ಏರ್‌ಲೈನ್ಸ್ ಸಮಸ್ಯೆ ತನಿಖೆಗೆ 4 ಸದಸ್ಯರ ತಂಡ ರಚಿಸಿದ ಕೇಂದ್ರ ಸರ್ಕಾರ