ವಿಪಕ್ಷಗಳಿಗೆ ‘ಅಮೂಲ್ಯ’ ಸಲಹೆ ನೀಡಿದ ಬಾಬಾ ರಾಮ್ ದೇವ್!

Published : Jun 01, 2019, 06:07 PM ISTUpdated : Jun 01, 2019, 06:08 PM IST
ವಿಪಕ್ಷಗಳಿಗೆ ‘ಅಮೂಲ್ಯ’ ಸಲಹೆ ನೀಡಿದ ಬಾಬಾ ರಾಮ್ ದೇವ್!

ಸಾರಾಂಶ

ವಿಪಕ್ಷ ನಾಯಕರಿಗೆ ಬಾಬಾ ರಾಮ್ ದೇವ್ ಕೊಟ್ಟ ಸಲಹೆ ಏನು?| ಮುಂದಿನ 10-15 ವರ್ಷಗಳ ಕಾಲ ಕಪಾಲಭಾತಿ ಮಾಡುವಂತೆ ಮನವಿ| ಒತ್ತಡ ನಿರ್ವಹಣೆಗೆ ಕಪಾಲಭಾತಿ ಮಾಡುವಂತೆ ರಾಮ್ ದೇವ್ ಸಲಹೆ|  ‘ಮೋದಿ ನಾಯಕತ್ವದಲ್ಲಿ ದೇಶ ಸಾಂಸ್ಕೃತಿಕ ದೌರ್ಜನ್ಯದಿಂದ ಮುಕ್ತಿ ಹೊಂದಲಿದೆ’| ಸಚಿವರು ಜನರ ನಿರೀಕ್ಷೆಯಂತೆ ಕೆಲಸ ಮಾಡಲಿದ್ದಾರೆ ಎಂದ ಯೋಗ ಗುರು|

ನವದೆಹಲಿ(ಜೂ.01): ಪ್ರಧಾನಿ ನರೇಂದ್ರ ಮೋದಿ 2 ನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ, ಯೋಗ ಗುರು ಬಾಬಾ ರಾಮ್ ದೇವ್ ವಿಪಕ್ಷಗಳಿಗೆ ಸಲಹೆ ನೀಡಿದ್ದಾರೆ.
 
ಮುಂದಿನ 10-15 ವರ್ಷ ಒತ್ತಡ ನಿರ್ವಹಣೆಗಾಗಿ ವಿಪಕ್ಷಗಳು ಕಪಾಲಭಾತಿ ಯೋಗ ಅಭ್ಯಾಸ ಮಾಡಿದರೆ ಒಳಿತು ಎಂದು ಬಾಬಾ ರಾಮ್ ದೇವ್ ವ್ಯಂಗ್ಯವಾಡಿದ್ದಾರೆ.

ಮುಂದಿನ 10-15 ವರ್ಷಗಳಲ್ಲಿ ವಿಪಕ್ಷಗಳ ನಾಯಕರು ಕಪಾಲಭಾತಿ ಮಾಡುತ್ತಾ ಒತ್ತಡ ನಿರ್ವಹಣೆ ಕಡಿಮೆ ಮಾಡಿಕೊಳ್ಳಲಿ ಎಂದು ರಾಮ್ ದೇವ್ ಹೇಳಿದ್ದಾರೆ.

ಮೋದಿ ನಾಯಕತ್ವದಲ್ಲಿ ದೇಶ ಆರ್ಥಿಕ ಮತ್ತು ಸಾಂಸ್ಕೃತಿಕ ದೌರ್ಜನ್ಯದಿಂದ ಸ್ವಾತಂತ್ರ್ಯ ಪಡೆಯಲಿದ್ದು, ಮೋದಿ ಸಂಪುಟದ ಸಚಿವರು ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲಿದ್ದಾರೆ ಎಂದು ರಾಮ್ ದೇವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ