ಮತ ಎಣಿಕೆ ವೇಳೆ 270 ಜನ ಸಾವು

Published : Apr 29, 2019, 08:47 AM IST
ಮತ ಎಣಿಕೆ ವೇಳೆ 270 ಜನ ಸಾವು

ಸಾರಾಂಶ

ಚುನಾವಣೆ ಪ್ರಕ್ರಿಯೆ ಎಂದರೆ ಒತ್ತಡ ಎನ್ನೋದು ಗ್ಯಾರಂಟಿ. ಇಂತಹ ಚುನಾವಣೆಯ ಮತ ಎಣಿಕೆ ವೇಳೆ ಒಟ್ಟು 270 ಮಂದಿ ಸಾವಿಗೀಡಾಗಿದ್ದಾರೆ. ಎಲ್ಲಿ, ಏನು..?

ಜಕಾರ್ತಾ: ಭಾರತದಲ್ಲಿ ಇವಿಎಂಗಳಿಗೆ ಗುಡ್‌ಬೈ ಹೇಳಿ ಮತ್ತೆ ಹಿಂದಿನ ಮತಪತ್ರ ವ್ಯವಸ್ಥೆ ಜಾರಿಗೆ ವಿಪಕ್ಷಗಳ ಒತ್ತಾಯ ಕೇಳಿಬರುತ್ತಿರುವ ನಡುವೆಯೇ, ನೆರೆಯ ಇಂಡೋನೇಷ್ಯಾದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ಮತಪತ್ರ ಎಣಿಸುವ ವೇಳೆ ಒತ್ತಡಕ್ಕೆ ಸಿಕ್ಕಿ 270 ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 

ಅಲ್ಲದೆ ತುರ್ತಾಗಿ ಫಲಿತಾಂಶ ನೀಡಬೇಕಾದ ಒತ್ತಡದಲ್ಲಿ ಸಿಬ್ಬಂದಿ ಅವಧಿ ಮೀರಿ ಕೆಲಸ ನಿರ್ವಹಿಸುವ ಪರಿಣಾಮ ಸುಮಾರು 2000 ಕ್ಕೂ ಹೆಚ್ಚು ಸಿಬ್ಬಂದಿ ವಿವಿಧ ರೀತಿಯ ಕಾಯಿಲೆಗೆ ತುತ್ತಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಹಣ ಉಳಿಸುವ ನಿಟ್ಟಿನಲ್ಲಿ ಇಂಡೋನೇಷ್ಯಾ ಸರ್ಕಾರ ಮಾಡಿದ ಪ್ರಯೋಗ ಇದೀಗ ಭಾರೀ ಟೀಕೆಗೆ ಗುರಿಯಾ ಗಿದೆ. ಇನ್ನೂ ಹಲವು ದಿನಗಳ ಕಾಲ ಮತ ಎಣಿಕೆ ಕಾರ‌್ಯ ಮುಂದುವರೆಯಬೇಕಿರುವ ಹಿನ್ನೆಲೆಯಲ್ಲಿ, ಇನ್ನಷ್ಟು ಆಘಾತಕಾರಿ ಸುದ್ದಿ ಹೊರಬೀಳುವ ಆತಂಕವೂ ವ್ಯಕ್ತವಾಗಿದೆ. ಹರಸಾಹಸ: 18000  ದ್ವೀಪಗಳನ್ನು ಹೊಂದಿರುವ ಇಂಡೋನೇಷ್ಯಾದಲ್ಲಿ ಮತದಾನ ಮುಗಿದ ಬಳಿಕ ಮತಪತ್ರ ಗಳನ್ನು ಮುಖ್ಯ ಕೇಂದ್ರಗಳಿಗೆ ಸಾಗಿಸುವುದೇ ದೊಡ್ಡ ಸಾಹಸವಾಗಿತ್ತು. ಅದಾದ ಬಳಿ ಸಾವಿರಾರು ಸಿಬ್ಬಂದಿಗಳು ತುರ್ತಾಗಿ ಫಲಿತಾಂಶ ನೀಡಬೇಕಾದ ಒತ್ತಡಕ್ಕೆ ಬಿದ್ದು, ಏ.18 ರಿಂದ ಅವಧಿ ಮೀರಿ ಮತಚೀಟಿಗಳ ಎಣಿಕೆ ಆರಂಭಿಸಿದ್ದರು. ಈ ಒತ್ತಡಕ್ಕೆ ಸಿಕ್ಕಿ ಕಳೆದ 10  ದಿನದಲ್ಲಿ   ದೇಶದ ವಿವಿಧ ಭಾಗಗಳಲ್ಲಿ  270 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 2000 ಕ್ಕೂ ಹೆಚ್ಚು ಸಿಬ್ಬಂದಿ 

ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗಿದ್ದಾ ಪರಿಹಾರ: ಚುನಾವಣೆ ಕರ್ತವ್ಯದ ವೇಳೆ ಸಾವನ್ನಪ್ಪಿದ ಸಿಬ್ಬಂದಿ ಕುಟುಂಬಕ್ಕೆ 2500 ಅಮೆರಿಕನ್ ಡಾಲರ್(1 ಲಕ್ಷ 75 ಸಾವಿರ ರು.) ಪರಿಹಾರ ನೀಡಲು ಚುನಾವಣೆ ಆಯೋಗ ನಿರ್ಧರಿಸಿದೆ.

22 ಕ್ಕೆ ಫಲಿತಾಂಶ: ಏತನ್ಮಧ್ಯೆ, ಬ್ಯಾಲೆಟ್‌ಪೇಪರ್‌ನಲ್ಲಿ ದಾಖಲಾಗಿರುವ ಮತಗಳನ್ನು ಎಣಿಸಿ, ಇಂಡೋನೇಷಿಯಾದ ಚುನಾವಣೆ ಆಯೋಗ ಮೇ 22ರಂದು ಫಲಿತಾಂಶ ಪ್ರಕಟಿಸಲಿದೆ. ಆದರೆ, ಅದಕ್ಕಿಂತ ಮುಂಚಿತವಾಗಿಯೇ ಅಧ್ಯಕ್ಷ ಜೋಕೋ ವಿಡೋಡೋ ಹಾಗೂ ಪ್ರತಿಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಪ್ರಭಾವೋ ಸುಬಿಯಾಂಟೋ ಅವರು ತಾವೇ ಜಯ ಗಳಿಸಿದ್ದಾಗಿ ಘೋಷಿಸಿಕೊಳ್ಳುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪದೇಪದೆ 'ನಮ್ಮಪ್ಪನೇ ಸಿಎಂ..' ಯತೀಂದ್ರ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರ? ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಕರ್ನಾಟಕ ವಿಧಾನಸಭೆಯಲ್ಲಿ ಎರಡು ಮಹತ್ವದ ವಿಧೇಯಕ ಮಂಡನೆ, ಉದ್ದೇಶಗಳು ಮತ್ತು ಕಾರಣಗಳು ಯಾವುವು?