
ಸೂರತ್: ಬರೋಬ್ಬರಿ 100 ಕೋಟಿ ರು. ಮೌಲ್ಯದ ಆಸ್ತಿ ಮತ್ತು 3 ವರ್ಷದ ಮಗುವನ್ನು ತೊರೆದು ಜೈನ ದೀಕ್ಷೆಗೆ ಮುಂದಾಗಿದ್ದ ಉತ್ತರಪ್ರದೇಶದ ದಂಪತಿ ಪೈಕಿ ಸುಮೀತ್ ರಾಥೋರ್ ಅವರಿಗೆ ಮಾತ್ರವೇ ಜೈನ ದೀಕ್ಷೆ ನೀಡಲಾಗಿದೆ.
ಸುಮೀತ್ ಅವರ ಪತ್ನಿ ಅನಾಮಿಕ ರಾಥೋರ್ ಅವರಿಗೆ ಕಾನೂನಿನ ತೊಡಕಿನ ಕಾರಣ ಸನ್ಯಾಸತ್ವ ನಿರಾಕರಿಸಲಾಗಿದೆ.
ಗುಜರಾತ್ನ ಸೂರತ್ನಲ್ಲಿರುವ ಸುಧಾಮಾರ್ಗಿ ಜೈನ ಆಚಾರ್ಯ ರಾಮ್ಲಾಲ್ ಜಿ ಮಹಾರಾಜ್ ಸಮ್ಮುಖದಲ್ಲಿ ಸುಮೀತ್ ಅವರು ಶನಿವಾರ ಸನ್ಯಾಸ ದೀಕ್ಷೆ ಪಡೆದರು.
ಈ ದಂಪತಿಗೆ ಇಭ್ಯಾ ಎಂಬ ಮೂರು ವರ್ಷದ ಹೆಣ್ಣು ಮಗುವಿದೆ. ಇಬ್ಬರೂ ಜೈನ ದೀಕ್ಷೆ ಪಡೆದು ಸನ್ಯಾಸಿಗಳಾದರೆ, ಮಗುವಿನ ಜವಾಬ್ದಾರಿ ಹೊರುವವರು ಯಾರು ಎಂಬ ಜಿಜ್ಞಾಸೆ ಮೂಡಿತ್ತು.
ಮಗುವನ್ನು ಒಂಟಿಯಾಗಿ ಬಿಟ್ಟು ದಂಪತಿ ಸನ್ಯಾಸಿ ದೀಕ್ಷೆಯ ನಿರ್ಧಾರಕ್ಕೆ ದೇಶಾದ್ಯಂತ ಭಾರೀ ಖಂಡನೆ ವ್ಯಕ್ತವಾಗಿತ್ತು.
ಅಲ್ಲದೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಕಾನೂನು ತೊಡಕುಗಳು ಮುಗಿಯುವವರೆಗೂ ಅನಾಮಿಕ ಅವರಿಗೆ ಜೈನ ದೀಕ್ಷೆ ಬೋಧಿಸದಿರುವ ನಿರ್ಧಾರ ಕೈಗೊಳ್ಳಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.