ನನ್ನ ಮಾತಿನಿಂದ ಬೇಸರವಾಗಿದ್ದರೆ ಕ್ಷಮಿಸಿ : ನಾನು ಒಕ್ಕಲಿಗರನ್ನು ತುಳಿದಿಲ್ಲ

Published : Oct 31, 2016, 04:52 PM ISTUpdated : Apr 11, 2018, 01:09 PM IST
ನನ್ನ ಮಾತಿನಿಂದ ಬೇಸರವಾಗಿದ್ದರೆ ಕ್ಷಮಿಸಿ : ನಾನು ಒಕ್ಕಲಿಗರನ್ನು ತುಳಿದಿಲ್ಲ

ಸಾರಾಂಶ

ಸ್ವಾಮೀಜಿಗಳು ಹಿಂದಿನಿಂದಲೂ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ. ಅಭಿವೃದ್ಧಿಗಾಗಿ ಅನೇಕ ಸಲಹೆಗಳನ್ನು ಕೊಡುತ್ತಾ ಬಂದಿದ್ದಾರೆ. ನಾನು ಸ್ವಾಮೀಜಿಗಳನ್ನು ಚುನಾವಣೆಗೆ ನಿಲ್ಲಿ ಎಂದಿಲ್ಲ  ಮುಖ್ಯಮಂತ್ರಿ ಆಗಿ ಎಂದು ಎಲ್ಲೂ ಹೇಳಿಲ್ಲ.

ಬೆಂಗಳೂರು(ಅ.31): ನಾನು ಆದಿಚುಂಚನಗಿರಿ ನಿರ್ಮಲನಂದ ಸ್ವಾಮೀಜಿ ಅವರ ಬಗ್ಗೆ ಲಘುವಾಗಿ ಮಾತನಾಡಿಲ್ಲ. ನಾನು ಮಾತನಾಡಿರುವ ಪದಗಳು ನಿಮ್ಮ ಮುಂದೆ ಇವೆ. ನನ್ನ ಮಾತಿನಿಂದ ಸ್ವಾಮೀಜಿಗಳಿಗೆ ಬೇಸರವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ತಿಳಿಸಿದರು.

ಸ್ವಾಮೀಜಿಯವರು ಆಳ್ವಿಕೆ ನಡೆಸಲಿ ಎಂಬ ವಿವಾದಿದ ಹೇಳಿಕೆ ಬಗ್ಗೆ ಸ್ಪಷ್ಟಿಕರಣ ನೀಡಿದ ಶಾಸಕ ಮುನಿರತ್ನ, ಸ್ವಾಮೀಜಿಗಳು ಹಿಂದಿನಿಂದಲೂ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ. ಅಭಿವೃದ್ಧಿಗಾಗಿ ಅನೇಕ ಸಲಹೆಗಳನ್ನು ಕೊಡುತ್ತಾ ಬಂದಿದ್ದಾರೆ. ನಾನು ಸ್ವಾಮೀಜಿಗಳನ್ನು ಚುನಾವಣೆಗೆ ನಿಲ್ಲಿ ಎಂದಿಲ್ಲ  ಮುಖ್ಯಮಂತ್ರಿ ಆಗಿ ಎಂದು ಎಲ್ಲೂ ಹೇಳಿಲ್ಲ. ನಾನು ಈ ಬಗ್ಗೆ ಸ್ವಾಮೀಜಿಗಳಿಗೆ ಸ್ಪಷ್ಟೀಕರಣ ಕೊಟ್ಟಿದ್ದೇನೆ.ಯಾವುದೇ ಸ್ವಾಮೀಜಿಗಳ ಬಗ್ಗೆ ಮಾತನಾಡುವ ವ್ಯಕ್ತಿ ನಾನಲ್ಲ ಎಂದರು.

ನಾನು ಶಾಸಕನಾಗಲು ಎಲ್ಲಾ ಸಮುದಾಯದಿಂದ ಮತ ಪಡೆದಿದ್ದೇನೆ. ಎಲ್ಲರೂ ನನಗೆ ಬೆಂಬಲ​ ನೀಡಿದ್ದಾರೆ. ನನ್ನ ಕ್ಷೇತ್ರದಲ್ಲಿ 8 ವಾರ್ಡ್​ನ ಪೈಕಿ 4 ವಾರ್ಡ್'ಅನ್ನು ಒಕ್ಕಲಿಗರಿಗೆ ನೀಡಿದ್ದೇನೆ. ನಾನು ಒಕ್ಕಲಿಗರನ್ನು ತುಳಿದಿಲ್ಲ. ನನಗೆ ಬಿಜೆಪಿಯಲ್ಲಿ ಸುರೇಶ್ ಕುಮಾರ್, ಸೋಮಣ್ಣ ಸ್ನೇಹಿತರು. ಅವರು ಹುಟ್ಟಿದ ಊರು, ವಿದ್ಯಾಭ್ಯಾಸ ಎಲ್ಲವೂ ನನ್ನ ಕ್ಷೇತ್ರವೇ. ಎಲ್ಲಾ 9 ಪಾಲಿಕೆ ಸದಸ್ಯರನ್ನು ಶೀಘ್ರವೇ ಸಭೆ ಕರೆಯಲಿದ್ದು, ಈ ಪ್ರಕರಣ ಬಿಟ್ಟುಬಿಡಿ ಪ್ರತಿಭಟನಾ ನಿರತರಿಗೆ ಮನವಿ ಮಾಡಿದರು.

Click Here : ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ