
ಹಾಸನ (ಅ. 12): ಸಚಿವ ರೇವಣ್ಣ ಅವರು ಹಾಸನದಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಗ ಲಿಫ್ಟ್ ಕೈಕೊಟ್ಟಿದ್ದರಿಂದ ಅಡಚಣೆ ಎದುರಿಸಬೇಕಾಯಿತು. ಆದರೆ, ರೇವಣ್ಣ ಅವರ ಪ್ರಕಾರ ಲಿಫ್ಟ್ ಕೆಟ್ಟಿದ್ದಕ್ಕೆ ತಾಂತ್ರಿಕ ದೋಷ ಕಾರಣ ಅಲ್ಲ!
ಲಿಫ್ಟ್ನಲ್ಲಿ ವಾಸ್ತು ದೋಷ ಇದ್ದಿದ್ದರಿಂದ ಅದು ಕಾರ್ಯನಿರ್ವಹಿಸಲಿಲ್ಲ. ಇದು ಕೇವಲ ಹಾಸನದಲ್ಲಿರುವ ಜಿಲ್ಲಾ ಕಚೇರಿಯ ದೋಷ ಅಲ್ಲ. ವಿಧಾನಸೌಧ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇರುವ ಲಿಫ್ಟ್ಗಳಲ್ಲಿ ವಾಸ್ತುದೋಷ ಇದೆ. ಹೀಗಾಗಿ ಪ್ರತಿ ಜಿಲ್ಲೆಯಲ್ಲೂ ಒಳ್ಳೆಯ ಪುರೋಹಿತರನ್ನು ಕರೆಸಿ ವಾಸ್ತುದೋಷವನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ರೇವಣ್ಣ ಸೂಚಿಸಿದ್ದಾರೆ. ಸಾಧ್ಯವಾದರೆ ಲಿಫ್ಟ್ ಅನ್ನು ಆಗ್ನೇಯ ಮೂಲೆಯಲ್ಲಿ ಹೊಸದಾಗಿ ನಿರ್ಮಿಸುವಂತೆ ಸಲಹೆ ನೀಡಿದ್ದಾರೆ ಎಂದು ಸುಳ್ಸುದ್ದಿ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.