ಸುವರ್ಣ ನ್ಯೂಸ್ Exclusive:ಕೆಪಿಎಸ್ಸಿ ಅಧ್ಯಕ್ಷ ಶ್ಯಾಮ್ ಭಟ್ ಭ್ರಷ್ಟಾಚಾರ ಬಯಲು

Published : Oct 12, 2018, 11:16 AM ISTUpdated : Oct 12, 2018, 12:51 PM IST
ಸುವರ್ಣ ನ್ಯೂಸ್  Exclusive:ಕೆಪಿಎಸ್ಸಿ ಅಧ್ಯಕ್ಷ  ಶ್ಯಾಮ್ ಭಟ್ ಭ್ರಷ್ಟಾಚಾರ ಬಯಲು

ಸಾರಾಂಶ

ಸುವರ್ಣ ನ್ಯೂಸ್ ಇವತ್ತು ಪ್ರಭಾವಿ ಅಧಿಕಾರಿಯ ಬಂಡವಾಳ ಬಯಲು ಮಾಡಿದೆ. ಪ್ರಭಾವಿಯಾಗಿ ಡೀಲ್ ಮಾಸ್ಟರ್ ಎಂದೇ ಕುಖ್ಯಾತಿಯಾಗಿದ್ದ ಆ ಅಧಿಕಾರಿಯ ಭ್ರಷ್ಟಾಚಾರ ಮುಖ ಕಳಚಿಬಿದ್ದಿದೆ.

ಬೆಂಗಳೂರು, [ಅ.12]: ಡೀಲ್ ಮಾಸ್ಟರ್ ಎಂದೇ ಕುಖ್ಯಾತಿಯಾಗಿದ್ದ ಕೆಪಿಎಸ್ಸಿ ಅಧ್ಯಕ್ಷರಾದ ಶ್ಯಾಮ್ ಭಟ್ ಅವರ ಮತ್ತೊಂದು ಭ್ರಷ್ಟಾಚಾರ ಮುಖ ಕಳಚಿಬಿದ್ದಿದೆ. ಲಂಚ ಪರಾಕ್ರಮದ ಬಗ್ಗೆ ಸುವರ್ಣ ನ್ಯೂಸ್ ಎಕ್ಸ್ ಕ್ಲೂಸಿವ್ ಆಗಿ ಸುದ್ದಿ  ಪ್ರಸಾರ ಮಾಡಿದೆ. 

ಬಿಡಿಎನಲ್ಲಿ 2012ರಿಂದ 2016ರವರೆಗೂ ಆಯುಕ್ತರಾಗಿ ಕುಳಿತಿದ್ದ ಟಿ.ಶ್ಯಾಮ್ ಭಟ್ ಫೈಲ್ ಗಳನ್ನು ಕ್ಲಿಯರ್ ಮಾಡಲು ಲಕ್ಷಾಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಆ  ವಿಡಿಯೋ ಇದೀಗ ಬಟಾಬಯಲಾಗಿದೆ.

100 ಫೈಲ್ ಗಳಿದ್ದು, ಒಂದು ಫೈಲ್ ಕ್ಲಿಯರ್ ಮಾಡಲು ತಲಾ ಒಂದಕ್ಕೆ 2 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ. ಅಂದರೆ. ಒಟ್ಟು 100 ಫೈಲ್ ಗಳಿಗೆ 2 ಕೋಟಿ ರೂಪಾಯಿಗೆ ಡೀಲ್ ಕುದಿರಿಸಿದ್ದಾರೆ.

ಶ್ಯಾಮ್ ಭಟ್ ಅವರು ತಮ್ಮ ಚೇಂಬರ್ ನಲ್ಲೇ BDA ಬ್ರೋಕರ್ ನನ್ನು ಕೂರಿಸಿಕೊಂಡು ಡೀಲ್ ಮಾಡಿದ್ದಾರೆ. ಬಿಡಿಎನಲ್ಲಿ 2012ರಿಂದ 2016ರವರೆಗೂ ಆಯುಕ್ತರಾಗಿ ಕುಳಿತಿದ್ದ ಟಿ.ಶ್ಯಾಮ್ ಭಟ್ ವೇಳೆ ಅದೆಷ್ಟೋ ಬಿಡಿಎ ಬಡಾವಣೆಗಳ ಜಮೀನು ಡಿ ನೋಟಿಫಿಕೇಷನ್ ಕೇಸಲ್ಲಿ ಇವರ ಪಾತ್ರವಿದೆ. 

 ಆದರೆ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ಬಚಾವ್ ಆಗಿದ್ದಾರೆ. ಇದೀಗ  ಬಿಡಿಎ ಬ್ರೋಕರ್ ಒಬ್ಬರು ಇದೇ ಶ್ಯಾಮ್ ಭಟ್ ಆಯುಕ್ತರಾಗಿದ್ದಾಗ ನಡೆಸಿದ್ದ ಡೀಲಿಂಗ್ ಬಯಲು ಮಾಡಿದ್ದಾರೆ.

 ಶ್ಯಾಮ್ ಭಟ್ ಅವರ ಡೀಲಿಂಗ್ ಬಗ್ಗೆ  ಜೆಡಿಎಸ್ ವಕ್ತಾರ ಪ್ರೊ.ಸಿ.ಎಸ್.ಸಿದ್ದರಾಜು ಎಸಿಬಿಗೆ ದೂರು ನೀಡಿದ್ದಾರೆ.

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು