
ಚಿತ್ರದುರ್ಗ (ಜ.26): ಕೋಮು ಗಲಭೆ ಪ್ರಕರಣಗಳಲ್ಲಿ ಭಾಗಿಯಾದ ಅಲ್ಪಸಂಖ್ಯಾತರ ಮೇಲಿನ ಕೇಸುಗಳನ್ನು ತೆರವು ಗೊಳಿಸುವ ವಿಚಾರಕ್ಕೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಪ್ರತಿಕ್ರಿಯಿಸಿದ್ದಾರೆ.
ಹಿಂದೂ, ಮುಸ್ಲಿಂ ಎಂಬ ಭೇದ ಭಾವ ಇಲ್ಲ. ಯಾವುದಾದರೂ ಕೋಮು ಘರ್ಷಣೆಯಲ್ಲಿ ಅನಾವಶ್ಯಕವಾಗಿ ಕೇಸು ದಾಖಲಾಗಿದ್ದರೆ ವಾಪಾಸ್ ಪಡೆಯುವ ಪ್ರಕ್ರಿಯೆ ಮೊದಲಿಂದಲೂ ನಡೆದಿದೆ. ನಾವು ಹಿಂದೂಗಳ ಕೇಸುಗಳನ್ನು ವಾಪಾಸ್ ತೆಗೆದುಕೊಂಡಿದ್ದೇವೆ. ಮುಸ್ಲಿಮರ ಕೇಸುಗಳನ್ನ ವಾಪಾಸ್ ಪಡೆದಿದ್ದೇವೆ. ಕನ್ನಡ ಪರ ಹೋರಾಟಗಾರರು, ರೈತಪರ ಚಳುವಳಿಗಾರರು, ದಲಿತ ಪರ ಇರುವ ಸಂಘಟನೆಗಳ ಮೇಲಿರೋ ಕೇಸುಗಳನ್ನು ಕೂಡ ವಾಪಾಸ್ ಪಡೆದಿದ್ದೇವೆ ಎಂದು ಆಂಜನೇಯ ಹೇಳಿದ್ದಾರೆ.
ವಾಪಾಸ್ ಪಡೆಯಲು ಅರ್ಹತೆಯುಳ್ಳ ಎಲ್ಲಾ ಕೇಸುಗಳನ್ನು ವಾಪಾಸ್ ಪಡೆಯುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಮಹಾದಾಯಿ ಹೋರಾಟಗಾರರ ಮೇಲಿರುವ ಕೇಸುಗಳ ಬಗ್ಗೆ ಸಿಎಂ ತೀರ್ಮಾನಿಸುತ್ತಾರೆ ಎಂದು ಆಂಜನೇಯ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.