ಮುಂದುವರೆದ ಮೇಲುಕೋಟೆ ಅರ್ಚಕರ ಜಟಾಪಟಿ; ದೇವಸ್ಥಾನಕ್ಕೆ ಬೀಗ

Published : Dec 14, 2017, 10:12 AM ISTUpdated : Apr 11, 2018, 12:51 PM IST
ಮುಂದುವರೆದ ಮೇಲುಕೋಟೆ ಅರ್ಚಕರ ಜಟಾಪಟಿ; ದೇವಸ್ಥಾನಕ್ಕೆ ಬೀಗ

ಸಾರಾಂಶ

ಮೇಲುಕೋಟೆ ಅರ್ಚಕರ ಗಲಾಟೆ ಸದ್ಯ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಭಾಷ್ಯಂ ಸ್ವಾಮೀಜಿ ಸೇರಿ ಮೂವರ ವಿರುದ್ಧ ಮೇಲುಕೋಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಮಂಡ್ಯ (ಡಿ.14): ಮೇಲುಕೋಟೆ ಅರ್ಚಕರ ಗಲಾಟೆ ಸದ್ಯ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಭಾಷ್ಯಂ ಸ್ವಾಮೀಜಿ ಸೇರಿ ಮೂವರ ವಿರುದ್ಧ ಮೇಲುಕೋಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಯೋಗ ನರಸಿಂಹಸ್ವಾಮಿ ದೇವಸ್ಥಾನದ ಪೂಜೆ ವಿಚಾರವಾಗಿ ಅರ್ಚಕರ ನಡುವೆ ಗಲಾಟೆ ನಡೆದಿತ್ತು.. ಅರ್ಚಕರಾದ ನಾರಾಯಣ ಭಟ್ ಮತ್ತು ಭಾಷ್ಯಂ ಸ್ವಾಮೀಜಿ ಮತ್ತು ಬೆಂಬಲಿಗರ ನಡುವೆ ಜಟಾಪಟಿ ನಡೆದಿದ್ದು ಸದ್ಯ ಗಲಾಟೆ ವಿಚಾರ ಠಾಣೆ ಮೆಟ್ಟಿಲೇರಿದೆ. ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ, ಕೊಲೆ ಬೆದರಿಕೆ ಆರೋಪದಡಿ ಎಫ್ಐಆರ್ ದಾಖಲಾಗಿದೆ. ಡಿಸೆಂಬರ್ 11ರಂದು ರಾತ್ರಿ ಯೋಗಾ ನರಸಿಂಹ ದೇವಾಲಯದಲ್ಲಿ ಪೂಜೆ ವಿಚಾರವಾಗಿ ಗಲಾಟೆ ನಡೆದಿತ್ತು.. ಪರಿಣಾಮ ಪುರಾತನ ಲಕ್ಷ್ಮಿ ನರಸಿಂಹ ದೇವಾಲಯದಲ್ಲಿ ಪೂಜಾ ಕೈಂಕರ್ಯ ನಿಂತೋಗಿತ್ತು. ಕಳೆದ 3 ದಿನಗಳಿಂದ ಗರ್ಭಗುಡಿಗೆ ಅರ್ಚಕ ಬೀಗ ಹಾಕಲಾಗಿದ್ದು ಭಕ್ತರು ಹಾಗೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುಕ್ಕೆ ದೇವಳ ಆಮಂತ್ರಣ ಪತ್ರಿಕೆ ವಿವಾದ; ಪ್ರೊಟೊಕಾಲ್ ಹೆಸರಲ್ಲಿ ಅನ್ಯಧರ್ಮೀಯರ ಆಹ್ವಾನಕ್ಕೆ ತೀವ್ರ ವಿರೋಧ!
ಚಿನ್ನ-ಬೆಳ್ಳಿ ಖರೀದಿ ಇನ್ನೂ ಕನಸಿನ ಮಾತು; ಆದ್ರೂ ಒಂದ್ಸಾರಿ ಗುಂಡಿಗೆ ಗಟ್ಟಿ ಮಾಡ್ಕೊಂಡು ಬೆಲೆ ನೋಡಿ