ಸಾಳ್ವೆಗೆ 1 ರೂ. ಸಂಭಾವನೆ ಹಸ್ತಾಂತರ: ಸುಷ್ಮಾ ಕೊನೆ ಆಸೆ ಪೂರೈಸಿದ ಪುತ್ರಿ!

By Web DeskFirst Published Sep 28, 2019, 8:47 AM IST
Highlights

ಕುಲಭೂಷಣ್‌ ಜಾಧವ್‌ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಿದ್ದ ವಕೀಲ ಹರೀಶ್‌ ಸಾಳ್ವೆ| ಜಾಧವ್‌ ಪರ ವಕೀಲಿಕೆ ಮಾಡಿದ್ದ ಸಾಳ್ವೆಗೆ 1 ಕಾಣಿಕೆ ಹಸ್ತಾಂತರಿಸಿದ ಸುಷ್ಮಾ ಸ್ವರಾಜ್‌ ಪುತ್ರಿ ಬಾನ್ಸುರಿ| 

ನವದೆಹಲಿ[ಸೆ.28]: ಪಾಕಿಸ್ತಾನದ ಬಂಧನದಲ್ಲಿರುವ ಭಾರತದ ಕುಲಭೂಷಣ್‌ ಜಾಧವ್‌ ಪರ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಿದ್ದ ವಕೀಲ ಹರೀಶ್‌ ಸಾಳ್ವೆ ಅವರು ಕೇಳಿದ್ದ 1 ರು. ಗೌರವ ಸಂಭಾವನೆಯನ್ನು ಸುಷ್ಮಾ ಸ್ವರಾಜ್‌ ಅವರ ಪುತ್ರಿ ಬಾನ್ಸುರಿ ಸ್ವರಾಜ್‌ ಅವರು ಪೂರೈಸಿದ್ದಾರೆ.

ಟ್ವಿಟರ್‌ನಲ್ಲಿ ದಿ.ಸುಷ್ಮಾ ಸ್ವರಾಜ್, ನಿಮಗೊಂದು ಮಾಹಿತಿ

ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಜಾಧವ್‌ ಪರ ವಾದಿಸಿ ನ್ಯಾಯ ಒದಗಿಸಿದ್ದ ಸಾಳ್ವೆ ಅವರು ಇದಕ್ಕೆ ಗೌರವಾರ್ಥವಾಗಿ ಕೇವಲ 1 ರು. ಸಂಭಾವನೆ ಪಡೆಯುವುದಾಗಿ ಹೇಳಿದ್ದರು. ಇದಕ್ಕೆ ಅಂದು ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್‌ ಅಭಿನಂದನೆಯನ್ನೂ ಸಲ್ಲಿಸಿದ್ದರು. ಆದರೆ ಈ 1 ರುಪಾಯಿಯನ್ನು ಅವರಿಗೆ ಕೊಡಲು ಕಾಲ ಕೂಡಿ ಬಂದಿರಲಿಲ್ಲ. ಆದರೆ ಅಂತಿಮವಾಗಿ 2019ರ ಆ.6ರಂದು ಸಂಜೆ ಸಾಳ್ವೆ ಅವರಿಗೆ ಕರೆ ಮಾಡಿದ್ದ ಸುಷ್ಮಾ, ನಾಳೆ ಬಂದು 1 ರುಪಾಯಿ ಪಡೆದುಕೊಂಡು ಹೋಗಿ ಎಂದಿದ್ದರು. ಈ ಕರೆ ಮಾಡಿದ 2 ಗಂಟೆಯಲ್ಲೇ ಸುಷ್ಮಾ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು.

Bansuri has fulfilled your last wish. She called on Mr.Harish Salve and presented the One Rupee coin that you left as fees for Kulbhushan Jadhav's case. pic.twitter.com/eyBtyWCSUD

— Governor Swaraj (@governorswaraj)

ಈ ಹಿನ್ನೆಲೆಯಲ್ಲಿ ಶುಕ್ರವಾರ ಸಾಳ್ವೆ ಅವರ ಮನೆಗೆ ತೆರಳಿದ ಸುಷ್ಮಾರ ಪುತ್ರಿ ಬಾನ್ಸುರಿ, 1 ರುಪಾಯಿ ನಾಣ್ಯ ಹಸ್ತಾಂತರಿಸುವ ಮೂಲಕ ತಮ್ಮ ತಾಯಿಯ ವಾಗ್ದಾನ ಪೂರೈಸಿದರು.

ಸುಷ್ಮಾ ಬದುಕಿಸಲು ವೈದ್ಯರಿಂದ 70 ನಿಮಿಷಗಳ ಹರಸಾಹಸ!

click me!