ಚುನಾವಣೆ ಗೆಲ್ಲಲು ವಿಷ ಕಾರುತ್ತಿರುವ ಪ್ರಧಾನಿ ಮೋದಿ: ಮಾಯಾವತಿ ವಾಗ್ದಾಳಿ

Published : Feb 20, 2017, 11:46 PM ISTUpdated : Apr 11, 2018, 12:45 PM IST
ಚುನಾವಣೆ ಗೆಲ್ಲಲು ವಿಷ ಕಾರುತ್ತಿರುವ ಪ್ರಧಾನಿ ಮೋದಿ: ಮಾಯಾವತಿ ವಾಗ್ದಾಳಿ

ಸಾರಾಂಶ

ಬಿಜೆಪಿ ತಾನು ಅಧಿಕಾರದಲ್ಲಿರುವ ರಾಜ್ಯಗಳ ಪ್ರತಿ ಗ್ರಾಮಗಳ ಹಿಂದುಗಳಿಗೆ ಮೊದಲು ಸ್ಮಶಾನ ಭೂಮಿ ಒದಗಿಸಲಿ, ಆ ಬಳಿಕ ಉತ್ತರ ಪ್ರದೇಶದ ಬಗ್ಗೆ ಮಾತನಾಡಲಿ ಎಂದು ಮಾಯಾವತಿ ಸವಾಲೆಸೆದಿದ್ದಾರೆ.

ಲಕ್ನೋ (ಫೆ.21): ಪ್ರಧಾನಿ ನರೆಂದ್ರ ಮೋದಿಯವರ ‘ಸ್ಮಶಾನ-ಖಬರಸ್ತಾನ’ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ, ಬಿಜೆಪಿಯು ಚುನಾವಣೆಯನ್ನು ಗೆಲ್ಲಲು ದ್ವೇಷ ರಾಜಕಾರಣ ಮಾಡುತ್ತಿದೆಯೆಂದಿದ್ದಾರೆ.

ನಿನ್ನೆ ಮೋದಿಯವರನ್ನು ‘ನೆಗೇಟಿವ್ ದಲಿತ್ ಮ್ಯಾನ್’ ಎಂದು ಕರೆದಿದ್ದ ಮಾಯಾವತಿ, ಬಿಜೆಪಿ ಅಧಿಕಾರಿದಲ್ಲಿರುವ ರಾಜ್ಯಗಳ ಪ್ರತಿ ಗ್ರಾಮದಲ್ಲಿ ಹಿಂದುಗಳಿಗೆ ಸ್ಮಶಾನ ಭೂಮಿಯಿದೆಯೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ತಾನು ಅಧಿಕಾರದಲ್ಲಿರುವ ರಾಜ್ಯಗಳ ಪ್ರತಿ ಗ್ರಾಮಗಳ ಹಿಂದುಗಳಿಗೆ ಮೊದಲು ಸ್ಮಶಾನ ಭೂಮಿ ಒದಗಿಸಲಿ, ಆ ಬಳಿಕ ಉತ್ತರ ಪ್ರದೇಶದ ಬಗ್ಗೆ ಮಾತನಾಡಲಿ ಎಂದು ಮಾಯಾವತಿ ಸವಾಲೆಸೆದಿದ್ದಾರೆ.

ಬಿಜೆಪಿಯು ನಿಕೃಷ್ಟ ಮಟ್ಟದ ರಾಜಕೀಯ ಮಾಡುತ್ತಿದೆ. ದೇಶದಲ್ಲಿರುವ ಅತ್ಯಂತ ಕೋಮುವಾದಿ ಪಾರ್ಟಿ ಬಿಜೆಪಿಯಾಗಿದೆ ಎಂದು ಅವರು ಹರಿಹಾಯ್ದಿದ್ದಾರೆ.

ಫತೇಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ರಂಜಾನ್’ನಲ್ಲಿ ವಿದ್ಯುತ್ ಇದ್ದರೆ ದೀಪಾವಳಿಯಲ್ಲೂ ಇರಬೇಕು. ಭೇದ-ಭಾವ ಇರಬಾರದು. ಗ್ರಾಮದಲ್ಲಿ ಕಬರಸ್ಥಾನ ಮಾಡಿದರೆ ಹಹಿಂದೂಗಳಿಗೆ ಸ್ಮಶಾನವೂ ಇರಬೇಕು ಎಂದು ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌