
ನವದೆಹಲಿ[ಮಾ.20]: ಮತ್ತೊಬ್ಬರ ಬದುಕಿನ ರೀತಿಯ ಕುರಿತು ಟೀಕಿಸುವ ನೈತಿಕತೆ ಬಿಎಸ್ಪಿ ನಾಯಕಿ ಮಾಯಾವತಿಗೆ ಇಲ್ಲ, ಸ್ವತಃ ಮಾಯಾವತಿ ದಿನನಿತ್ಯ ಮುಖಕ್ಕೆ ಸೌಂದರ್ಯ ವರ್ಧಕ ಮತ್ತು ತಲೆಗೆ ಬಣ್ಣ ಬಳಸುತ್ತಾರೆ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ನಾರಾಯಣ ಸಿಂಗ್ ತಿರುಗೇಟು ನೀಡಿದ್ದಾರೆ.
2014ರಲ್ಲಿ ಮೋದಿ ಚಾಯ್ವಾಲಾ ಆಗಿದ್ದರು, ಇದೀಗ ಅವರು ಚೌಕೀದಾರನಾಗಿ ಬದಲಾಗಿದ್ದಾರೆ ಎಂದು ಮಾಯಾವತಿ ಟ್ವೀಟರ್ನಲ್ಲಿ ಲೇವಡಿ ಮಾಡಿದ್ದರು.
ಅದಕ್ಕೆ ತಿರುಗೇಟು ನೀಡಿದ ಸುರೇಂದ್ರಸಿಂಗ್, ಉತ್ತಮ ವಸ್ತ್ರ ಧರಿಸುವುದು ಐಷಾರಾಮಿ ಜೀವನ ಅಲ್ಲ, ಮುಖಕ್ಕೆ ಸೌಂದರ್ಯ ವರ್ಧಕ ಬಳಸುವ ಮಾಯಾವತಿಗೆ, ಉತ್ತಮ ಬಟ್ಟೆಧರಿಸುವವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. 60 ವರ್ಷದ ಮಾಯಾವತಿ ತಲೆಗೂದಲು ಇನ್ನೂ ಕಪ್ಪಿರುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.