
ಗುಡಗಾಂವ್[ಮಾ.20]: ಪುಲ್ವಾಮಾ ದಾಳಿ ಘಟನೆಯನ್ನು ಮರೆಯುವುದಿಲ್ಲ, ಮರೆಯಲು ಸಾಧ್ಯವೂ ಇಲ್ಲ. ಇಂಥ ಘಟನೆಯನ್ನು ಧೈರ್ಯವಾಗಿ ನಿಭಾಯಿಸಲು ದೇಶ ಸಮರ್ಥರಾಗಿದ್ದು, ಸೂಕ್ತ ಸಂದರ್ಭದಲ್ಲಿ ತಕ್ಕ ಉತ್ತರ ನೀಡಲು ಕಾಯುತ್ತಿದ್ದೇವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹೇಳಿದ್ದಾರೆ.
ಸಿಆರ್ಪಿಎಫ್ನ80ನೇ ಸಂಸ್ಥಾಪನಾ ದಿನದಲ್ಲಿ ಪಾಲ್ಗೊಂಡು ಮಾತನಾಡಿ, ಏನು ಮಾಡಬೇಕು, ನಮ್ಮ ಮಾರ್ಗ ಯಾವುದು ಎಂಬ ಬಗ್ಗೆ ನಮಗೆ ನಿಖರತೆ ಇದೆ. ಈ ನಿಟ್ಟಿನಲ್ಲಿ ನಮ್ಮ ಸೇನೆ ಮತ್ತು ನಾಯಕತ್ವ ಇಂಥವುಗಳನ್ನು ಧೈರ್ಯದಿಂದ ಎದುರಿಸಲು ಸಮರ್ಥವಾಗಿವೆ. ದೇಶ ಇಂಥ ಹಲವು ಸವಾಲುಗಳನ್ನು ಸಮರ್ಥವಾಗಿ ನಿರ್ವಹಿಸಿದೆ. ಪುಲ್ವಾಮಾ ದಾಳಿ ಮೂರು ದಶಕಗಳಲ್ಲೇ ಅತ್ಯಂತ ಕೆಟ್ಟಘಟನೆ ಎಂದಿದ್ದಾರೆ.
2019ರ ಫೆಬ್ರವರಿ 14ರಂದು ಶ್ರೀನಗರದಿಂದ ಜ್ಮು ಕಾಶ್ಮೀರದೆಡೆ ತೆರಳುತ್ತಿದ್ದ CRPF ಯೋಧರ ಮೇಲೆ ಜೈಷ್ ಉಗ್ರ ಸಂಘಟನೆಯು ಆತ್ಮಾಹುತಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಭಾರತೀಯ ಸೇನೆಯ ಸುಮಾರು 40 ಯೋಧರು ಹುತಾತ್ಮರಾಗಿದ್ದರು. ಘಟನೆಯ ಬಳಿಕ ದೇಶದಾದ್ಯಂತ ಪಾಕ್ ವಿರುದ್ಧ ಪ್ರತೀಕಾರದ ಕೂಗು ಕೆಲಿ ಬಂದಿತ್ತು. ಈ ದಾಳಿ ಅಂತರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿದ್ದು, ಉಗ್ರರಿಗೆ ಆಶ್ರಯ ನಿಡುತ್ತಿರುವ ಪಾಕಿಸ್ತಾನದ ನಡೆಯನ್ನು ಖಂಡಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.