ಇಂದು ಹುತಾತ್ಮ ಯೋಧ ಚಂದ್ರು ಅಂತ್ಯಸಂಸ್ಕಾರ

Published : Mar 15, 2018, 09:47 AM ISTUpdated : Apr 11, 2018, 01:07 PM IST
ಇಂದು ಹುತಾತ್ಮ ಯೋಧ ಚಂದ್ರು ಅಂತ್ಯಸಂಸ್ಕಾರ

ಸಾರಾಂಶ

ಹುತಾತ್ಮ ಯೋಧ ಚಂದ್ರು ಅಂತ್ಯ ಸಂಸ್ಕಾರ  ಇಂದು‌ ಅವರ ಸ್ವಗ್ರಾಮ  ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹರದೂರು ಗ್ರಾಮದಲ್ಲಿ ಮಧ್ಯಾಹ್ನ‌12 ಗಂಟೆಗೆ ನಡೆಯಲಿದೆ. 

ಬೆಂಗಳೂರು (ಮಾ. 15): ಹುತಾತ್ಮ ಯೋಧ ಚಂದ್ರು ಅಂತ್ಯ ಸಂಸ್ಕಾರ ಇಂದು‌ ಅವರ ಸ್ವಗ್ರಾಮ  ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹರದೂರು ಗ್ರಾಮದಲ್ಲಿ ಮಧ್ಯಾಹ್ನ‌12 ಗಂಟೆಗೆ ನಡೆಯಲಿದೆ. 
 

ಬೆಳಿಗ್ಗೆ 8-30 ರಿಂದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.  ಅರಕಲಗೂಡು ತಾಲ್ಲೂಕು‌ ಕಛೇರಿ ಎದುರು ಸಾರ್ವಜನಿಕ ರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.  ಮಾರ್ಚ್13 ರಂದು ಛತ್ತೀಸ್’ಗಡ್  ರಾಜ್ಯದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದ್ದ ನಕ್ಸಲ್ ದಾಳಿಗೆ  ಯೋಧ ಚಂದ್ರು ಬಲಿಯಾಗಿದ್ದರು. 

ವೀರ ಯೋಧನ ಮೃತದೇಹ  ನಿನ್ನೆ ರಾತ್ರಿ ತವರು ಜಿಲ್ಲೆ ತಲುಪಿದೆ.  ಹುಟ್ಟೂರು ಹರದೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ  ಅಂತ್ಯಕ್ರಿಯೆ ನೆರವೇರಲಿದೆ.  ಅಂತ್ಯಕ್ರಿಯೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಉಸ್ತುವಾರಿ ಸಚಿವ ಎ.ಮಂಜು ಸೇರಿ ಹಲವು ಗಣ್ಯರು ಭಾಗಿಯಾಗಲಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ