
ಜೋಧ್'ಪುರ: ಆತ ಫೆ.5ರಂದು ಜೈಪುರದಲ್ಲಿ ನಡೆಯಲಿರುವ ಹಾಫ್ ಮ್ಯಾರಥಾನ್ನಲ್ಲಿ ಓಡುತ್ತಾನೆ. ಅದರಲ್ಲಿ ಅವನು ಗೆಲ್ಲುತ್ತಾನೋ, ಇಲ್ಲವೋ ಗೊತ್ತಿಲ್ಲ. ಆದರೆ, ಫಿನಿಶಿಂಗ್ ಲೈನ್'ನಲ್ಲಿ ಅವನ ಬದುಕಿನ ಗೆಲವು ಅವನಿಗೋಸ್ಕರ ಕಾಯುತ್ತಿರುವುದಂತೂ ಖಚಿತ.
ಮದುವೆ ದಿನ ಹತ್ತಿರ ಬಂದಾಗ ಏನೇ ಕೆಲಸವಿದ್ದರೂ ಬಿಡುವು ಮಾಡಿಕೊಂಡು, ಹಲವು ಕಸರತ್ತು ಮಾಡಿ ರಜೆ ಗಿಟ್ಟಿಸಿಕೊಳ್ಳುವವರನ್ನು ನೋಡಿರುತ್ತೀರಿ. ಆದರೆ, ಜೈಪುರದ ಅನಂತ್ ತ್ರಿವೇದಿ(31) ಮದುವೆಗಾಗಿ ಮ್ಯಾರಥಾನ್ ಬಿಡಲು ಸಿದ್ಧರಿಲ್ಲ. ಅದಕ್ಕಾಗಿ ಅವರು, ಮ್ಯಾರಥಾನ್ ಮುಗಿಸಿದ ಮರುಕ್ಷಣವೇ ಮದುವೆಯಾಗಲು ನಿರ್ಧರಿಸಿದ್ದಾರೆ. ಇದಕ್ಕೆ ಅವರ ಭಾವಿ ಪತ್ನಿ ಕವಿತಾ ಕೂಡ ಒಪ್ಪಿಗೆ ಕೊಟ್ಟಿದ್ದಾರೆ. ಅದರಂತೆ, ಫೆ.5ರಂದು ಮ್ಯಾರಥಾನ್ನ ಫಿನಿಶಿಂಗ್ ಲೈನ್ನಲ್ಲೇ ಇವರ ವಿವಾಹ ನೆರವೇರಲಿದೆ. ಅತ್ತ ಮ್ಯಾರಥಾನ್ನ ಗಡಿ ತಲುಪುತ್ತಿರುವಂತೆಯೇ, ತ್ರಿವೇದಿಗಾಗಿ ಹೂಹಾರ ಹಿಡಿದುಕೊಂಡು ಕವಿತಾ ಕಾಯುತ್ತಿರುತ್ತಾಳೆ. ಬೆಂಗಳೂರಿನಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ಎಂಜಿನಿಯರ್ ತ್ರಿವೇದಿ ಹಾಗೂ ಸಾಫ್ಟ್'ವೇರ್ ಉದ್ಯೋಗಿ ಕವಿತಾ ಇಬ್ಬರೂ ಮ್ಯಾರಥಾನ್ ಪ್ರೇಮಿಗಳು. ಆದರೆ, ಗಾಯದ ಸಮಸ್ಯೆಯಿಂದಾಗಿ ಆಕೆ ಓಡುತ್ತಿಲ್ಲ. ಹೂಹಾರ ಬದಲಿಸಿಕೊಂಡ ಬಳಿಕ ಹಿಂದೂ ಸಂಪ್ರದಾಯದಂತೆ ಅಂದೇ ಕೋಟಾದಲ್ಲಿ ಅವರ ಮದುವೆ ನಡೆಯಲಿದೆ.
(epaper.kannadaprabha.in)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.