ಬಿಜೆಪಿಯೊಂದಿಗಿನ 25 ವರ್ಷದ ಮೈತ್ರಿ ವ್ಯರ್ಥ

Published : Jan 28, 2017, 10:57 AM ISTUpdated : Apr 11, 2018, 12:46 PM IST
ಬಿಜೆಪಿಯೊಂದಿಗಿನ 25 ವರ್ಷದ ಮೈತ್ರಿ ವ್ಯರ್ಥ

ಸಾರಾಂಶ

ತನ್ನ ಲಾಭಕ್ಕಾಗಿ ಬಿಜೆಪಿ, ಛತ್ರಪತಿ ಶಿವಾಜಿ ಹಾಗೂ ಲೋಕಮಾನ್ಯ ತಿಲಕ್ ಅವರನ್ನು ರಾಷ್ಟ್ರದ್ರೋಹಿಗಳು ಎಂದು ಕರೆಯಲೂ ಹಿಂಜರೆಯದು ಎಂದು ಶಿವಸೇನೆ ಆರೋಪಿಸಿದೆ.

ಮುಂಬೈ(ಜ.28): ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಅಂತ್ಯಗೊಳಿಸಿರುವ ಶಿವಸೇನೆ, ಬಿಜೆಪಿಯೊಂದಿಗಿನ ಮೈತ್ರಿಯಲ್ಲಿ 25 ವರ್ಷ ವ್ಯರ್ಥವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಸಾಮ್ನಾದಲ್ಲಿ ಈ ಬಗ್ಗೆ ಲೇಖನ ಪ್ರಕಟಿಸಿರುವ ಶಿವಸೇನೆ, ಹಿಂದುತ್ವ ಹಾಗೂ ಮಹಾರಾಷ್ಟ್ರದ ಹಿತಾಸಕ್ತಿಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿತ್ತು. ಆದರೆ ತನ್ನ ಜಾತ್ಯಾತೀತತೆಯನ್ನು ತೋರಿಸಿಕೊಳ್ಳಲು ಬಿಜೆಪಿ ತನ್ನ ಮೂಲ ಉದ್ದೇಶಗಳಿಂದ ದೂರ ಸರಿದಿದೆ. ತನ್ನ ಲಾಭಕ್ಕಾಗಿ ಬಿಜೆಪಿ, ಛತ್ರಪತಿ ಶಿವಾಜಿ ಹಾಗೂ ಲೋಕಮಾನ್ಯ ತಿಲಕ್ ಅವರನ್ನು ರಾಷ್ಟ್ರದ್ರೋಹಿಗಳು ಎಂದು ಕರೆಯಲೂ ಹಿಂಜರೆಯದು ಎಂದು ಶಿವಸೇನೆ ಆರೋಪಿಸಿದೆ.

ಹಿಂದುತ್ವ ಹಾಗೂ ಮಹಾರಾಷ್ಟ್ರದ ಹಿತಾಸಕ್ತಿಯ ಸಲುವಾಗಿ ಬಿಜೆಪಿಯ ಧೋರಣೆಯನ್ನು ಕಳೆದ 25 ವರ್ಷಗಳಿಂದ ಸಹಿಸಿಕೊಂಡು ಬರುತ್ತಿದ್ದೇವೆ. ಆದರೆ ಅವೆಲ್ಲವೂ ಈಗ ವ್ಯರ್ಥವಾಗಿದೆ. 25 ವರ್ಷದ ಹಿಂದೆ ಆಗಬೇಕಿದ್ದದ್ದು ಈಗ ನಡೆದಿದೆ ಎಂದು ಶಿವಸೇನೆ ಬಿಜೆಪಿಯೊಂದಿಗೆ ಮೈತ್ರಿ ಅಂತ್ಯಗೊಳಿಸಿರುವುದರ ಬಗ್ಗೆ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಿಪಂ ಸದಸ್ಯ ಯೋಗೇಶ್‌ ಗೌಡ ಹತ್ಯೆ ಕೇಸ್‌: ವಿನಯ್‌ ಕುಲಕರ್ಣಿಗೆ ಬೇಲ್‌ ಅಗತ್ಯವೇ ಇಲ್ಲ: ಸಿಬಿಐ ವಾದ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು