ಇಂಟರ್‌ಸಿಟಿ ರೈಲಿನಲ್ಲಿ ಕೊಳಚೆ ನೀರಿನ ಚಾಯ್‌!

Published : Jul 18, 2019, 09:52 AM IST
ಇಂಟರ್‌ಸಿಟಿ ರೈಲಿನಲ್ಲಿ  ಕೊಳಚೆ ನೀರಿನ ಚಾಯ್‌!

ಸಾರಾಂಶ

ಮಂಗಳೂರು-ಮಡಂಗಾವ್ ಇಂಟರ್‌ಸಿಟಿ ರೈಲಿನಲ್ಲಿ ಕೊಳಚೆ ನೀರಿನ ಚಾಯ್‌!  ಚಹಾ ಮಾರುವ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡ ರೈಲ್ವೇ ಅಧಿಕಾರಿಗಳು 

ಮಂಗಳೂರು (ಜು. 18): ಚಹಾ ತುಂಬಿದ ಪಾತ್ರೆ ನೆಲಕ್ಕೆ ಬಿದ್ದು, ಪಾತ್ರೆಯೊಳಗೆ ಕೊಳಚೆ ನೀರು ತುಂಬಿದರೂ ಅದನ್ನು ಪ್ರಯಾಣಿಕರಿಗೆ ವಿತರಿಸಲು ಮುಂದಾದ ಆತಂಕಕಾರಿ ಘಟನೆ ಮಂಗಳೂರು- ಮಡಗಾಂವ್‌ ಇಂಟರ್‌ಸಿಟಿ ರೈಲಿನಲ್ಲಿ ಬುಧವಾರ ನಡೆದಿದೆ. ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗಡೆ ಮುತುವರ್ಜಿ ವಹಿಸಿದ್ದರಿಂದ ರೈಲ್ವೆ ಅಧಿಕಾರಿಗಳು ಚಹಾ ಮಾರುವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಎಂ.ಜಿ.ಹೆಗಡೆ ಬುಧವಾರ ಸುರತ್ಕಲ್‌ನಲ್ಲಿ ಈ ರೈಲು ಹತ್ತಿದ್ದರು. ಈ ವೇಳೆ ಇನ್ನೊಂದು ರೈಲಿನಿಂದ ಚಹಾ ತುಂಬಿದ ಪಾತ್ರೆಗಳನ್ನು ವ್ಯಕ್ತಿಯೊಬ್ಬ ಇಳಿಸುತ್ತಿದ್ದಾಗ ಒಂದು ಪಾತ್ರೆ ಕೆಳಗೆ ಬಿದ್ದು, ಕೊಳಚೆ ನೀರು ಅದರೊಳಗೆ ತುಂಬಿತ್ತು.

ಇದನ್ನು ರೈಲಿನಲ್ಲಿದ್ದ ಕಲ್ಲಡ್ಕದ ವ್ಯಕ್ತಿಯೊಬ್ಬರು ಗಮನಿಸಿ ಫೋಟೋ ಮತ್ತು ವಿಡಿಯೋ ಮಾಡಿದ್ದರು. ಬಳಿಕ ಚಹಾ ಮಾರುವ ವ್ಯಕ್ತಿ ಕೊಳಚೆ ತುಂಬಿದ ಪಾತ್ರೆಯ ಚಹಾವನ್ನು ಚೆಲ್ಲದೆ ಮಾರಾಟಕ್ಕೆ ಸಿದ್ಧನಾಗಿದ್ದ. ನೋಡಿದರೆ ಆ ಪಾತ್ರೆಯಲ್ಲಿ ಕೊಳಕು ನೀರಿನೊಂದಿಗೆ ಸೇರಿಬಂದ ಗುಟ್ಕಾ ಪ್ಯಾಕೆಟ್‌ ಕೂಡ ಇತ್ತು!

ತಕ್ಷಣ ಎಂ.ಜಿ.ಹೆಗಡೆ ಸಂಬಂಧಿಸಿದ ರೈಲ್ವೆ ಅಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ. ರೈಲು ಉಡುಪಿ ನಿಲ್ದಾಣಕ್ಕೆ ಹೋದಾಗ ರೈಲ್ವೆ ಅಧಿಕಾರಿಗಳು ಚಹಾ ಮಾರುವ ವ್ಯಕ್ತಿ ಸೇರಿದಂತೆ ಸಹಿತ ಕೊಳಚೆ ಚಹಾವನ್ನೂ ವಶಕ್ಕೆ ತೆಗೆದುಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಮೊದಲ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ ವಾರಾಣಸಿಯಲ್ಲಿ ಶುರು
ಎಐ ನಿರ್ಮಾತೃಗಳಿಗೆ 2025ರ ಟೈಮ್ ವರ್ಷದ ವ್ಯಕ್ತಿ ಗೌರವ!