ನ.3, 4ರಂದು ಮೊದಲ 'ಮಂಗಳೂರು ಲಿಟ್ ಫೆಸ್ಟ್'

Published : Oct 25, 2018, 12:25 PM IST
ನ.3, 4ರಂದು ಮೊದಲ 'ಮಂಗಳೂರು ಲಿಟ್ ಫೆಸ್ಟ್'

ಸಾರಾಂಶ

ಸಾಹಿತಿಗಳ ಸಂಗಮದೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಮೊದಲ ಸಾಹಿತ್ಯ ಜಾತ್ರೆಗೆ ಮಂಗಳೂರು ಸಜ್ಜಾಗುತ್ತಿದೆ. ನ.3 ಮತ್ತು 4ರಂದು ‘ದಿ ಐಡಿಯಾ ಆಫ್ ಭಾರತ್’ ಪರಿಕಲ್ಪನೆಯಡಿ ‘ಮಂಗಳೂರು ಲಿಟ್ ಫೆಸ್ಟ್ -2018’ ನಡೆಯಲಿದೆ. 

ಮಂಗಳೂರು :  ಮಾಡುತ್ತಿರುವ ಸಾಹಿತಿಗಳ ಸಂಗಮದೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಮೊದಲ ಸಾಹಿತ್ಯ ಜಾತ್ರೆಗೆ ಮಂಗಳೂರು ಸಜ್ಜಾಗುತ್ತಿದೆ. ನ.3 ಮತ್ತು 4ರಂದು ‘ದಿ ಐಡಿಯಾ ಆಫ್ ಭಾರತ್’ ಪರಿಕಲ್ಪನೆಯಡಿ ‘ಮಂಗಳೂರು ಲಿಟ್ ಫೆಸ್ಟ್ -2018’ ನಡೆಯಲಿದೆ. ಈ ಸಾಹಿತ್ಯ ಉತ್ಸವ ಕೇವಲ ಒಂದು ಭಾಷೆಗೆ ಸೀಮಿತವಾಗಿರದೆ ಪಂಚಭಾಷಾ ಸಂಗಮಕ್ಕೆ ಸಾಕ್ಷಿಯಾಗಲಿದೆ.

ಹಿಂದಿ, ಇಂಗ್ಲಿಷ್, ಕನ್ನಡ, ತುಳು, ಕೊಂಕಣಿ ಭಾಷೆಗಳಲ್ಲಿ ಸುಮಾರು 12 ವಿವಿಧ ಗೋಷ್ಠಿಗಳು ನಡೆಯಲಿವೆ. ಇದೇ ವೇಳೆ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ತರಂಗ ಸಂಪಾದಕಿ ಸಂಧ್ಯಾ ಪೈ, ನಿಟ್ಟೆ ವಿವಿ ಕುಲಪತಿ ಡಾ.ವಿನಯ ಹೆಗ್ಡೆ ಈ ಸಾಹಿತ್ಯ ಜಾತ್ರೆಯ ಮುಖ್ಯ ಸಂಯೋಜಕರಾಗಿದ್ದಾರೆ. ಮಂಗಳೂರು ಲಿಟರರಿ ಫೌಂಡೇಶನ್ ಆಯೋಜನೆಯಲ್ಲಿ ನಗರದ ಕೊಡಿಯಾಲ್ ಬೈಲ್ ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಹಾಲ್‌ನಲ್ಲಿ ಸಾಹಿತ್ಯ ಉತ್ಸವ ನಡೆಯಲಿದೆ. ಭಾರತೀಯತೆಗಾಗಿ ಬದುಕು-ಬರಹ ಮುಡಿಪಾಗಿಟ್ಟ ವಿಶ್ವಾದ್ಯಂತ ನೆಲೆಸಿರುವ ಸುಮಾರು 45ಕ್ಕೂ ಹೆಚ್ಚು ಸಾಹಿತಿಗಳು ಭಾಗವಹಿಸಲಿದ್ದಾರೆ.

ರಾಜೀವ್ ಮಲ್ಹೋತ್ರ, ಡಾ| ಡೇವಿಡ್ ಫ್ರಾಲೆ, ಅನಿರ್ಬಾನ್ ಗಂಗೂಲಿ, ಶಾಲಿನಿ ಛೋಪ್ರಾ, ಮಧುಕೀಶ್ವರ್, ಅಭಿನವ್ ಪ್ರಕಾಶ್, ಗೌತಮ್ ಚಿಕರ್‌ಮನೆ, ಎಂ. ಆರ್. ವೆಂಕಟೇಶ್, ಶಿಫಾಲಿ ವೈದ್ಯ, ಆನಂದ್ ರಂಗನಾಥನ್, ಚಕ್ರವರ್ತಿ ಸೂಲಿಬೆಲೆ, ರಿಷಭ್ ಶೆಟ್ಟಿ, ಮೇಜರ್ ಗೌರವ್ ವಾರಿಯಾ, ನಂದಕುಮಾರ್ ಮೊದಲಾದವರು ಭಾಗವಹಿಸಲಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

After Ayodhya Badarinath Temple Hit: ಅಯೋಧ್ಯೆ ಬಳಿಕ ಬದರೀನಾಥ ದೇಗುಲದಲ್ಲೂ ಹುಂಡಿ ಅಕ್ರಮ, ತನಿಖೆಗೆ ಆದೇಶ
ಚುನಾವಣೆ ಆಯೋಗ ಕತ್ತೆ ಕಾಯ್ತಿದೆಯೇ? SIR ನಲ್ಲಿ ತಪ್ಪಾಗುತ್ತಿದ್ದರೆ ಕ್ರಮ ಜರುಗಿಸಲಿ: ಪ್ರಿಯಾಂಕ್ ಖರ್ಗೆ