ಜನರ ಜೀವ ರಕ್ಷಿಸಿ ತಾನೇ ಬಲಿಯಾದ ನಾಟಕದ ‘ರಾವಣ’!

Published : Oct 20, 2018, 07:18 PM IST
ಜನರ ಜೀವ ರಕ್ಷಿಸಿ ತಾನೇ ಬಲಿಯಾದ ನಾಟಕದ ‘ರಾವಣ’!

ಸಾರಾಂಶ

ಜನರ ಜೀವ ಉಳಿಸಿ ಪ್ರಾಣತೆತ್ತ ನಾಟಕದ ರಾವಣ! ಅಮೃತಸರ್ ರೈಲು ದುರಂತದಲ್ಲಿ ಬಲಿಯಾದ ರಾವಣ ಪಾತ್ರಧಾರಿ! ನಾಟಕದಲ್ಲಿ ರಾವಣನ ಪಾತ್ರ ಧರಿಸಿದ್ದ ದಲ್ಬೀರ್ ಸಿಂಗ್ ಬಲಿ! ಹಳಿ ಪಕ್ಕ ನಿಂತಿದ್ದ ಜನರನ್ನು ರಕ್ಷಿಸಿ ರೈಲಿಗೆ ಬಲಿಯಾದ ದಲ್ಬೀರ್

ಅಮೃತಸರ(ಅ.20): ದಸರಾ ಹಬ್ಬದ ಆಚರಣೆ ವೇಳೆ ನಡೆದ ರೈಲು ಅಪಘಾತದಲ್ಲಿ ರಾವಣನ ವೇಷ ಧರಿಸಿದ್ದ ಕಲಾವಿದ, ಜನರನ್ನು ರಕ್ಷಿಸಿ ಕೊನೆಯಲ್ಲಿ ತಾನು ಬಲಿಯಾಗಿದ್ದಾನೆ. 

ರೈಲು ಹಳಿಯಲ್ಲಿದ್ದ ಏಳೆಂಟು ಮಂದಿಯನ್ನು ಹಳಿಯಿಂದ ದೂರಕ್ಕೆ ತಳ್ಳಿದ ದಲ್ಬೀರ್‌ ಸಿಂಗ್‌ ಎಂಬ ರಾವಣ ಪಾತ್ರಧಾರಿ ಕೊನೆಯಲ್ಲಿ ತಾನೇ ರೈಲಿಗೆ ಸಿಲುಕಿ ಜೀವ ತೆತ್ತಿದ್ದಾನೆ. 

ರಾಮಲೀಲಾ ಪ್ರದರ್ಶನದಲ್ಲಿ ರಾವಣನ ವೇಷ ಹಾಕಿದ್ದ ದಲ್ಬೀರ್ ಸಿಂಗ್‌, ತನ್ನ ಪಾತ್ರವಾದ ಬಳಿಕ ರಾವಣ ಸಂಹಾರದ ದೃಶ್ಯ ನೋಡಲು ಹಳಿಯ ಬಳಿ ನಿಂತಿದ್ದ. ಈ ವೇಳೆ ವೇಗವಾಗಿ ಬಂದ ರೈಲು ಜನರ ಮೇಲೆ ಹರಿದಿದೆ. ಕೂಡಲೇ ಹಳಿ ಪಕ್ಕ ನಿಂತಿದ್ದ ಜನರನ್ನು ಸಲ್ಬೀರ್ ಸಿಂಗ್ ರಕ್ಷಿಸಿ ಕೊನೆಗೆ ತಾನೇ ರೈಲಿಗೆ ಬಲಿಯಾಗಿದ್ದಾನೆ. ದಲ್ಬೀರ್ 8 ತಿಂಗಳ ಪುತ್ರಿ ಹಾಗೂ ಪತ್ನಿಯನ್ನು ಅಗಲಿದ್ದಾರೆ.

ಕಳೆದ ಕೆಲವಾರು ವರ್ಷಗಳಿಂದ ದಲ್ಬೀರ್‌ ಸಿಂಗ್‌ ರಾಮಲೀಲಾ ಪ್ರದರ್ಶನದಲ್ಲಿ ವಿವಿಧ ಪಾತ್ರಗಳನ್ನು ನಿಭಾಯಿಸುತ್ತಿದ್ದ. ಈ ಬಾರಿಯ ದಸರಾ ಉತ್ಸವದಲ್ಲಿ ರಾವಣನ ಪಾತ್ರಧಾರಿಯಾಗಿದ್ದ ಅವನ ಮೇಲೆ ರೈಲು ಹರಿದು ಮೃತಪಟ್ಟಿದ್ದಾನೆ. ಇನ್ನು ಸರ್ಕಾರದಿಂದ ಪರಿಹಾರ ಸಿಗುವವರೆಗೆ ದಲ್ಬೀರ್‌ ಅಂತ್ಯ ಸಂಸ್ಕಾರ ನಡೆಸುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ