ಹೇಗಿದ್ದ ಹೇಗಾದ ಗೊತ್ತಾ..? ಒಂದೇ-ಒಂದು ಔಷಧಿಗೆ ತಲೆಗೂದಲು ಮಾಯ...!

Published : Sep 11, 2017, 01:47 PM ISTUpdated : Apr 11, 2018, 12:50 PM IST
ಹೇಗಿದ್ದ ಹೇಗಾದ ಗೊತ್ತಾ..? ಒಂದೇ-ಒಂದು ಔಷಧಿಗೆ ತಲೆಗೂದಲು ಮಾಯ...!

ಸಾರಾಂಶ

ಚಿಕಿತ್ಸೆಗಾಗಿ ಸುಮಾರು 60 ಸಾವಿರ ಹಣವನ್ನೂ ಸಹ ಕಳೆದುಕೊಂಡ ಯುವಕನಿಗೆ ದಿಕ್ಕೆ ತೋಚದಂತಾಗಿದ್ದು, ನ್ಯಾಯಕ್ಕಾಗಿ ಮಾಧ್ಯಮಗಳ ಮುಂದೆ ತನ್ನ ಗೋಳನ್ನು ತೋಡಿಕೊಂಡಿದ್ದಾನೆ.

ಧಾರವಾಡ(ಸೆ.11):  ಕೂದಲು ಉದುರುವುದನ್ನ ತಡೆಗಟ್ಟಲು ಹೋದ ಯುವಕನೊಬ್ಬ ಈಗ ಸಂಪೂರ್ಣ ಬೋಳನಾದ ಘಟನೆ ಧಾರವಾಡದಲ್ಲಿ ನಡೆದಿದೆ.

ಗಂಗಾಧರ  ಹೂಗಾರ ಎಂಬ ಯುವಕನಿಗೆ ವಿಪರೀತ ತಲೆಕೂದಲು ವಿಪರೀತ ಉದುರುತ್ತಿತ್ತು. ಹೀಗಾಗಿ ಹುಬ್ಬಳ್ಳಿ ಮೂಲದ ಖಾಸಗಿ ಕಂಪನಿಯೊಂದರಲ್ಲಿ ಚಿಕಿತ್ಸೆ ಪಡೆದಿದ್ದ.

ಇದೀಗ ಅವರ ಟ್ರೀಟ್​ ಮೆಂಟ್​'ನಿಂದ ಯುವಕನ ತಲೆಕೂದಲು, ಹುಬ್ಬಿನ ಕೂದಲು ಸಂಪೂರ್ಣ ಉದುರಿ ಹೋಗಿದೆ. ಮೈಮೇಲಿನ ಕೂದಲು ಸಹ ಉದುರುತ್ತಿದೆಯಂತೆ. ಸುಂದರವಾಗಿದ್ದ ಗಂಗಾಧರ  ಹೂಗಾರ ಇದೀಗ ಸಂಪೂರ್ಣ ಬೋಳಾಗಿದ್ದು, ಕಂಗಾಲಾಗಿದ್ದಾನೆ.

ಚಿಕಿತ್ಸೆಗಾಗಿ ಸುಮಾರು 60 ಸಾವಿರ ಹಣವನ್ನೂ ಸಹ ಕಳೆದುಕೊಂಡ ಯುವಕನಿಗೆ ದಿಕ್ಕೆ ತೋಚದಂತಾಗಿದ್ದು, ನ್ಯಾಯಕ್ಕಾಗಿ ಮಾಧ್ಯಮಗಳ ಮುಂದೆ ತನ್ನ ಗೋಳನ್ನು ತೋಡಿಕೊಂಡಿದ್ದಾನೆ.

ಇನ್ನು ಯುವಕನಿಗೆ ಚಿಕಿತ್ಸೆ ನೀಡಿದ  ಖಾಸಗಿ ಕಂಪನಿಯನ್ನು ಕೇಳಲು ಹೋದರೆ, ಯಾವುದೇ ರೀತಿ ಸ್ಪಂದಿಸದೇ ಇನ್ನೂ ಚಿಕಿತ್ಸೆ ಬಾಕಿ ಇದೆ ಅಂತಿದಾರಂತೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಗ್ ಬಾಸ್ ಪುಟುಗೋಸಿ ಶೋ, ಆಕ್ರೋಶಕ್ಕೆ ಗುರಿಯಾದ ಬೆಂಗಳೂರು ಕರವೇ ನಾಯಕನ ಹೇಳಿಕೆ
ಮುಂದಿನ ಚುನಾವಣೆಗೆ ನಾನು ನಿಲ್ಲದಿದ್ದರೂ ಸರಿ, ಆರ್.ಅಶೋಕ್ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಿ ಸೋಲಿಸಿಯೇ ಸಿದ್ಧ!