ಕಬಡ್ಡಿ ಸೋತಿದ್ದಕ್ಕೆ ‘ಕಿಕ್’ : ಕೊಪ್ಪಳದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯನ ಮಗನ ಅಟ್ಟಹಾಸ

Published : Feb 08, 2018, 08:20 AM ISTUpdated : Apr 11, 2018, 12:47 PM IST
ಕಬಡ್ಡಿ ಸೋತಿದ್ದಕ್ಕೆ ‘ಕಿಕ್’ : ಕೊಪ್ಪಳದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯನ ಮಗನ ಅಟ್ಟಹಾಸ

ಸಾರಾಂಶ

ಗಣೇಶ್ ಗಿಣಗೇರಿಯ ಮೊಬೈಲ್ ಅಂಗಡಿಗೆ ಹೋದಾಗ ಮಾರುತೆಪ್ಪ ಮಗ ವಿಜಯ್ ಆತನನ್ನು ಬೈಕ್ ಮೇಲೆ ಹೊತ್ತೊಯ್ದು ಜಮೀನೊಂದರಲ್ಲಿ ರಾಡ್'ನಿಂದ ಥಳಿಸಿದ್ದಾರಂತೆ. ಕೈ ಕಟ್ಟಿ ಹಾಕಿ ಕಬ್ಬಿಣದ ರಾಡ್'ನಿಂದ ಥಳಿಸಿದ ಪರಿಣಾಮ ಗಣೇಶ ಎರಡು ಕೈಗಳು ಮುರಿದು ಹೋಗಿವೆ.

ಕೊಪ್ಪಳ(ಫೆ.08): ಹಳೆ ದ್ವೇಷದ ಹಿನ್ನಲೆಯಲ್ಲಿ ಮಾಜಿ ಜಿಪಂ ಸದಸ್ಯನ ಮಗ ಆತನ ಗ್ಯಾಂಗ್ ಯುವಕನೋರ್ವನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ತಾಲೂಕಿನ ಗಿಣಗೇರಿ ಗ್ರಾಮದ ಮಾಜಿ ಜಿಪಂ ಸದಸ್ಯ ಮಾರುತೆಪ್ಪ ಹಲಗೇರಿ ಮಗ ವಿಜಯ್ ಆತನ ಸ್ನೇಹಿತರಾದ ಶಿವು ಪರುಶುರಾಮ್ ಸೇರಿದಂತೆ 15 ಜನರ ತಂಡ ಹಿಗ್ಗಾಮುಗ್ಗ ಥಳಿಸಿದ ಆರೋಪ ಕೇಳಿ ಬಂದಿದೆ. ಕೊಪ್ಪಳ ತಾಲೂಕಿನ ಕನಕಾಪೂರ ಗ್ರಾಮದ ಗಣೇಶ್ ಎಂಬ ಯುವಕನನ್ನು ಮೂರು ಗಂಟೆಗಳ ಕಾಲ ಕಟ್ಟಿ ಹಾಕಿ ಥಳಿಸಿದ್ದಾರಂತೆ. ಗಣೇಶ್ ಗಿಣಗೇರಿಯ ಮೊಬೈಲ್ ಅಂಗಡಿಗೆ ಹೋದಾಗ ಮಾರುತೆಪ್ಪ ಮಗ ವಿಜಯ್ ಆತನನ್ನು ಬೈಕ್ ಮೇಲೆ ಹೊತ್ತೊಯ್ದು ಜಮೀನೊಂದರಲ್ಲಿ ರಾಡ್'ನಿಂದ ಥಳಿಸಿದ್ದಾರಂತೆ. ಕೈ ಕಟ್ಟಿ ಹಾಕಿ ಕಬ್ಬಿಣದ ರಾಡ್'ನಿಂದ ಥಳಿಸಿದ ಪರಿಣಾಮ ಗಣೇಶ ಎರಡು ಕೈಗಳು ಮುರಿದು ಹೋಗಿವೆ.

ಈ ಘಟನೆಗೆ ಹಳೆ ದ್ವೇಷವೇ ಕಾರಣವಾಗಿದ್ದು,ಕಳೆದ ಎಂಟು ತಿಂಗಳ ಹಿಂದೆ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ನಡೆದ ಗಲಾಟೆ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ಮೂರು ಗಂಟೆಗಳ ಕಾಲ ದರ್ಪ ಮಾಡಿದ ಖದೀಮರು ತದನಂತರ ಗಣೇಶನನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ. ವಿಷಯ ತಿಳಿಯಿತ್ತಿದದ್ದಂಯೆ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಬಂದ ಗಣೇಶ್ ಸಂಬಂಧಿಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ ಮಾಡಿದರು. ಆಸ್ಪತ್ರೆಯ ಮುಂದೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕೊಪ್ಪಳ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ