
ನವದೆಹಲಿ(ಜೂ.06): ಮೊನ್ನೆ ನಡೆದ ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಲು ಮದ್ಯ ದೊರೆ ವಿಜಯ್ ಮಲ್ಯ ಕಾಣಿಸಿಕೊಂಡಿದ್ದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಭಾರತ ಮಾಧ್ಯಮಗಳ ವಿರುದ್ಧ ಉದ್ಯಮಿ ವಿಜಯ್ ಮಲ್ಯ ಗರಂ ಆಗಿದ್ದಾರೆ. ಭಾರತದ ಮಾಧ್ಯಮಗಳ ಬಗ್ಗೆ ಕಿಡಿಕಾರಿ ಟ್ವೀಟ್ ಮಾಡಿರುವ ವಿಜಯ್ ಮಲ್ಯ, ನಾನು ವಿದೇಶಗಳಲ್ಲಿ ನಡೆಯುವ ಭಾರತದ ಎಲ್ಲ ಪಂದ್ಯಗಳನ್ನು ವೀಕ್ಷಿಸುವೆ. ಟೀಮ್ ಇಂಡಿಯಾ ಪ್ರೊತ್ಸಾಹಿಸಲು ಪಂದ್ಯ ವೀಕ್ಷಣೆಗೆ ತೆರಳಿದಿದ್ದೆ. ಆದರೆ ನಾನು ಹಾಜರಾಗಿದ್ದನ್ನೇ ಭಾರತದ ಮಾಧ್ಯಮಗಳು ಅನಗತ್ಯವಾಗಿ ಪ್ರಸಾರ ಮಾಡಿವೆ ಅಂತಾ ಗುಡುಗಿದ್ದಾರೆ.
ಅಲ್ಲದೇ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಕುರಿತು ಹೊಗಳಿಕೆ ಮಾತುಗಳನ್ನಾಡಿರುವ ಮಲ್ಯ, 'ಕೊಹ್ಲಿ ಓರ್ವ ವಿಶ್ವದರ್ಜೆ ಆಟಗಾರ, ನಾಯಕ ಮತ್ತು ಜೆಂಟಲ್ಮೆನ್' ಎಂದು ಹೊಗಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.