ಆಹಾರ ಸ್ವಾತಂತ್ರ್ಯ ಕಾಪಾಡಲು ಗೋಮಾಂಸ ಸೇವಿಸುತ್ತೇನೆಂದ ಶುದ್ಧ ಸಸ್ಯಹಾರಿ!

Published : Jun 01, 2017, 01:08 PM ISTUpdated : Apr 11, 2018, 01:11 PM IST
ಆಹಾರ ಸ್ವಾತಂತ್ರ್ಯ ಕಾಪಾಡಲು ಗೋಮಾಂಸ ಸೇವಿಸುತ್ತೇನೆಂದ ಶುದ್ಧ ಸಸ್ಯಹಾರಿ!

ಸಾರಾಂಶ

ನಾನೊಬ್ಬ ಪ್ರಧಾನಿ ಮೊದಿಯ ಕಟ್ಟಾ ಬೆಂಬಲಿಗ ಹಾಗೂ ಸಸ್ಯಹಾರಿ. ಆದರೆ ಆಹಾರದ ಸ್ವಾತಂತ್ರ್ಯವನ್ನು ಕಾಪಾಡಲು ನಾನೀಗ ಗೋಮಾಂಸ ಸೇವಿಸಲಿದ್ದೇನೆ ಎಂದು ಜನಪ್ರಿಯ ಪ್ರಯಾಣ ಆ್ಯಪ್‌ ಮೇಕ್ ಮೈ ಟ್ರಿಪ್’ನ ಸಹಸಂಸ್ಥಾಪಕ ಕೇಯುರ್ ಜೋಷಿ ಟ್ವೀಟಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗಿದೆ.

ಗೋಹತ್ಯೆ ತಡೆಯಲು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಪ್ರಧಾನಿ ನರೇಂದ್ರ ಮೋದಿಯ ಕಟ್ಟಾ ಬೆಂಬಲಿಗರೇ ವಿರೋಧ ಮಾಡಿ ಟ್ವಿಟರ್’ನಲ್ಲಿ ವಿವಾದ ಸೃಷ್ಟಿಸಿದ್ದಾರೆ.

ನಾನೊಬ್ಬ ಪ್ರಧಾನಿ ಮೊದಿಯ ಕಟ್ಟಾ ಬೆಂಬಲಿಗ ಹಾಗೂ ಸಸ್ಯಹಾರಿ. ಆದರೆ ಆಹಾರದ ಸ್ವಾತಂತ್ರ್ಯವನ್ನು ಕಾಪಾಡಲು ನಾನೀಗ ಗೋಮಾಂಸ ಸೇವಿಸಲಿದ್ದೇನೆ ಎಂದು ಜನಪ್ರಿಯ ಪ್ರಯಾಣ ಆ್ಯಪ್‌ ಮೇಕ್ ಮೈ ಟ್ರಿಪ್’ನ ಸಹಸಂಸ್ಥಾಪಕ ಕೇಯುರ್ ಜೋಷಿ ಟ್ವೀಟಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗಿದೆ.

ಮುಂದುವರಿದು, ಹಿಂದೂ ಧರ್ಮವು ಆಹಾರದ ಆಯ್ಕೆಯನ್ನು ಕಿತ್ತುಕೊಳ್ಳುತ್ತದೆಯೆಂದಾದಲ್ಲಿ, ನಾನು ಹಿಂದೂ ಅಲ್ಲವೆಂದು ಜೋಷಿ ಹೇಳಿದ್ದಾರೆ. ಜನರು ಏನನ್ನು ತಿನ್ನಬೇಕೆಂದು ನರೇಂದ್ರ ಮೋದಿ ಹಾಗೂ ಬಿಜೆಪಿ ನಿರ್ಧರಿಸುವಂತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್’ನಲ್ಲಿ ಜೋಷಿ ಗೋಹತ್ಯೆಯನ್ನು ವಿರೋಧಿಸುವವರ ಕೆಂಗಣ್ಣಿಗೆ ಬಲಿಯಾಗಿದ್ದಾರೆ. ಪ್ರತಿಭಟನೆಯ ರೂಪದಲ್ಲಿ ಮೇಕ್ ಮೈ ಟ್ರಿಪ್ ಆ್ಯಪ್‌'ನ್ನು ಅಳಿಸಿಹಾಕುವ ಅಭಿಯಾನ ಆರಂಭಿಸಿದ್ದಾರೆ.

ಅದಕ್ಕೆ ಸ್ಪಷ್ಟೀಕರಣ ನೀಡಿರುವ ಮೇಕ್ ಮೈ ಟ್ರಿಪ್ ಸಂಸ್ಥೆಯು ಅದು ಜೋಷಿ ಅವರದ್ದು ವೈಯುಕ್ತಿಕ ಅಭಿಪ್ರಾಯವಾಗಿದೆ ಎಂದು ಹೇಳಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜೀವ ನೀಡಿದವಳೇ ಉಸಿರು ತೆಗೆದಳು: ಅಡ್ಡದಾರಿ ಹಿಡಿದ ತಾಯಿ: ಬುದ್ದಿ ಹೇಳಿದ 16ರ ಹರೆಯದ ಮಗಳ ಕೊಲೆ
ಹೊಸ ವರ್ಷದಲ್ಲಿ ಸಂಪುಟ ವಿಸ್ತರಣೆ ಖಚಿತ; ನಾನೂ ಸಚಿವ ಸ್ಥಾನದ ಆಕಾಂಕ್ಷಿ-ಶಾಸಕ ಡಾ. ಅಜಯ್ ಸಿಂಗ್