
ನಾಗ್ಪುರ್(ಜ.05): 2050ರಲ್ಲಿ ಮಹಾರಾಷ್ಟ್ರದಿಂದ ಒಬ್ಬರಿಗಿಂತ ಹೆಚ್ಚು ಮಂದಿ ದೇಶದ ಪ್ರಧಾನಿಯಾಗಿ ಆಳ್ವಿಕೆ ನಡೆಸುತ್ತಾರೆ ಎಂದು ಮುಖ್ಯಮಂತ್ರಿ ದೇವೇಂದ್ ಫಡ್ನವೀಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಗ್ಪುರ್ದಲ್ಲಿ ನಡೆದ 16ನೇ ಜಾಗತಿಕ ಮರಾಠಿ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಯಾರಾದರೂ ನಿಜವಾದ ಅರ್ಥದಲ್ಲಿ ಭಾರತವನ್ನು ಆಳುತ್ತಾರೆ ಎಂದಾದರೇ ಅದರಲ್ಲಿ ಬಬ್ಬರಿಗಿಂತ ಹೆಚ್ಚುು ಮಹಾರಾಷ್ಟ್ರದವರು ಇರುತ್ತಾರೆ ಎಂದು ನುಡಿದರು.
ನಾವು ಮಹಾರಾಷ್ಟ್ರಿಗರು ನಮಗೆ ದೇಶ ಆಳುವ ಸಾಮರ್ಥ್ಯ ಇದೆ ಎಂದ ಫಡ್ನವೀಸ್, ಭಾರತದಲ್ಲಿ ಮಹಾರಾಷ್ಟ್ರದವರೊಬ್ಬರು ಪ್ರಧಾನಿಯಾಗುವ ಅವಕಾಶವಿದೆ ಎಂದು ಹೇಳಿದರು.
ಇತಿಹಾಸದಲ್ಲಿ ಹಲವು ಮಹಾರಾಷ್ಟ್ರಿಗರು ವಿವಿಧ ಕಾಲಘಟ್ಟದಲ್ಲಿ ದೇಶದಲ್ಲಿ ಆಳ್ವಿಕೆ ನಡೆಸಿರುವ ಉದಾಹರಣೆಯಿದೆ ಎಂದು ಫಡ್ನವೀಸ್ ಈ ವೇಳೆ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.