ಬೀದರ್ ಬಳಿ ಮಿನಿ ಬಸ್ ಅಪಘಾತ; ಓರ್ವ ವಿದ್ಯಾರ್ಥಿ ಸಾವು

Published : Jan 05, 2019, 03:03 PM IST
ಬೀದರ್ ಬಳಿ ಮಿನಿ ಬಸ್ ಅಪಘಾತ; ಓರ್ವ ವಿದ್ಯಾರ್ಥಿ ಸಾವು

ಸಾರಾಂಶ

ಹುಬ್ಬಳಿ ಬಳಿ ಮಿನಿ ಬಸ್ ಅಪಘಾತ; ಓರ್ವ ವಿದ್ಯಾರ್ಥಿ ಸಾವು | ಶಾಲಾ ಪ್ರವಾಸದ ವೇಳೆ ದುರ್ಘಟನೆ | ತಡವಾಗಿ ಬೆಳಕಿಗೆ ಬಂದಿದೆ ಘಟನೆ 

ಬೀದರ್ (ಜ. 05): ಖಾಸಗಿ ಮಿನಿ ಬಸ್ ಹುಬ್ಬಳ್ಳಿ ‌ಬಳಿ ಅಪಘಾತಕ್ಕೀಡಾಗಿದ್ದು ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.  ‌ 

ಖಾಸಗಿ ಬಸ್ಸಿನಲ್ಲಿ ಅನುದಾನಿತ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲಾಗಿತ್ತು. ಮರಳಿ‌ ಬರುವಾಗ ನಿನ್ನೆ ತಡರಾತ್ರಿ ಖಾಸಗಿ ಮಿನಿ ಬಸ್ ಹುಬ್ಬಳ್ಳಿ ‌ಬಳಿ‌ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ  ಎಂಟನೇ ತರಗತಿ ವಿದ್ಯಾರ್ಥಿ ಅಭಿಷೇಕ ಈರಪ್ಪ  ಕೊಳಾರ (16) ಸಾವನ್ನಪ್ಪಿದ್ದಾನೆ. 

ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಅನುಮತಿ ಪಡೆಯದೆ ಕಳೆದ ಏಳು ದಿನಗಳ ಹಿಂದೆ ವಿದ್ಯಾರ್ಥಿಗಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಮುಖ್ಯಗುರು ಸಿದ್ರಾಮ ನಿಜಾಂಪೂರ್ ಪ್ರಕರಣ ಮುಚ್ಚಿ‌ ಹಾಕಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪ್ರವಾಸದ ಹೆಸರಲ್ಲಿ ಶಿಕ್ಷಕಿ ಮದುವೆಗೆ ಮಂಗಳೂರಿಗೆ ‌ಪ್ರಯಾಣಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ರೀಡಾಪಟುಗಳಿಗೆ ಸರ್ಕಾರಿ ನೇಮಕಾತಿಯಲ್ಲಿ ಹೆಚ್ಚುವರಿ ಮೀಸಲಾತಿ: ಸಿಎಂ ಸಿದ್ದರಾಮಯ್ಯ
India Latest News Live:ಡಾಲರ್ ಎದುರು ರುಪಾಯಿ ಮೌಲ್ಯ ₹90.32ಕ್ಕೆ ಕುಸಿತ: ಇದು ಸಾರ್ವಕಾಲಿಕ ಕನಿಷ್ಠ