ತುಮಕೂರು ಕಿರಿಯ ಶ್ರೀಗಳ ಹೆಸರನ್ನು ತಪ್ಪಾಗಿ ಹೇಳಿ ಎಂ ಬಿ ಪಾಟೀಲ್ ಎಡವಟ್ಟು

Published : Mar 28, 2018, 11:55 AM ISTUpdated : Apr 11, 2018, 01:02 PM IST
ತುಮಕೂರು ಕಿರಿಯ ಶ್ರೀಗಳ ಹೆಸರನ್ನು ತಪ್ಪಾಗಿ ಹೇಳಿ ಎಂ ಬಿ ಪಾಟೀಲ್ ಎಡವಟ್ಟು

ಸಾರಾಂಶ

ಸಚಿವ ಎಮ್ ಬಿ ಪಾಟೀಲ್ ತುಮಕೂರಿನ ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿಯನ್ನು ಸಿದ್ದೇಶ್ವರ ಸ್ವಾಮೀಜಿ ಎಂದು ಹೇಳಿ ಎಡವಟ್ಟು ಮಾಡಿದ್ದಾರೆ. 

ಬೆಂಗಳೂರು (ಮಾ. 28): ಸಚಿವ ಎಮ್ ಬಿ ಪಾಟೀಲ್ ತುಮಕೂರಿನ ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿಯನ್ನು ಸಿದ್ದೇಶ್ವರ ಸ್ವಾಮೀಜಿ ಎಂದು ಹೇಳಿ ಎಡವಟ್ಟು ಮಾಡಿದ್ದಾರೆ. 

ತುಮಕೂರು ಮಠದಲ್ಲಿ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮ ಇತ್ತು.  ನೀತಿ ಸಂಹಿತೆ ಕಾರಣ ಕಾರ್ಯಕ್ರಮ ರದ್ದು ಮಾಡಲಾಗಿತ್ತು.  ಶ್ರೀಗಳ ಆಶೀರ್ವಾದ ಪಡೆದ ಪಾಟೀಲರು ಲಿಂಗಾಯತ ಪ್ರತ್ಯೇಕ ಧರ್ಮದ ಶಿಪಾರಸ್ಸು ಮಾಡಿದ ಬಗ್ಗೆ ಕಿರಿಯ ಶ್ರೀಗಳು ಸ್ವಾಗತಿಸಿದ್ದಾರೆ. ಹಾಗಾಗಿ ಶ್ರೀಗಳೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದೇನೆ. ಮುಂದಿನ  ಹೋರಾಟಕ್ಕೆ ಕಿರಿಯ ಶ್ರೀಗಳ ಮಾರ್ಗದರ್ಶನ ಇರಲಿದೆ. ಅವರ ಮಾರ್ಗದರ್ಶನದಂತೆ ನಾವು ಮುಂದಿನ ಹೋರಾಟ ಮಾಡುತ್ತೇವೆ ಎಂದಿದ್ದಾರೆ.   

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಅಮಿತ್ ಷಾ ವಿರೋಧದ ಬಗ್ಗೆ ಪ್ರತಿಕ್ರಿಯಿಸುತ್ತಾ,  ಅಮಿತ್ ಷಾಗೆ ಟಾಂಗ್ ನೀಡಿದ್ದಾರೆ.  ಜೈನ ಸಮುದಾಯದವರು ಕೇಂದ್ರದಿಂದ ಜೈನ ಧರ್ಮಕ್ಕೆ ಪ್ರತ್ಯೇಕತೆ ಸಿಕ್ಕಾಗ ಆಗ ಸಮಾಜ ಒಡೆಯಲಿಲ್ವಾ ಎಂದು ಅಮಿತ್ ಷಾ ಗೆ ಎಮ್ ಬಿ ಪಾಟೀಲ್ ಪ್ರಶ್ನಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಿಕ್ಷಕರ, ಶಿಕ್ಷಣ ಸಂಸ್ಥೆಗಳ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವೆ: ಸಚಿವ ಮಧು ಬಂಗಾರಪ್ಪ
ಡಿಕೆಶಿ ಕುಂಡಲಿಯಲ್ಲಿ ಷಷ್ಠ ಸ್ಥಾನದಲ್ಲಿ ಶನಿ: ರಾಜಕೀಯ ಭವಿಷ್ಯವೇನು? CM ಖುರ್ಚಿ ಯಾರಿಗೆ? ಭೈರವಿ ಅಮ್ಮ ಸ್ಫೋಟಕ ನುಡಿ