
ಲಕ್ನೋ (ಮಾ.25): ಅನಧಿಕೃತ ಹಾಗೂ ಯಾಂತ್ರಿಕೃತ ಕಸಾಯಿಖಾನೆಗಳಿಗೆ ತ್ತರ ಪ್ರದೆಶ ಸರ್ಕಾರ ಬೀಗ ಜಡಿಯುತ್ತಿರುವ ಕ್ರಮವನ್ನು ಖಂಡಿಸಿ, ಮಾಂಸ ಮಾರಾಟಗಾರರು ಅನಿರ್ದಷ್ಟಾವಧಿ ಪ್ರತಿಭಟನೆಯನ್ನು ಆರಂಭಿಸಿದ್ದಾರೆ.
ಕೋಳಿ ಹಾಗೂ ಮೇಕೆ ಮಾಂಸ ಮಾರಾಟಗಾರು ಕೂಡಾ ಅಂಗಡಿಗಳನ್ನು ಮುಚ್ಚಿದ್ದು, ಸೋಮವಾರದಿಂದ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಮಾಂಸ ವ್ಯಾಪಾರಸ್ಥ ಸಂಘದ ಅಧ್ಯಕ್ಷ ಮುಬೀನ್ ಖುರೇಶಿ ಹೇಳಿದ್ದಾರೆ.
ಮಾಂಸದ ಅಲಭ್ಯತೆಯಿಂದಾಗಿ ಮಾಂಸಾಹಾರ ಹೋಟೆಲ್’ಗಳು ಕೂಡಾ ಮುಚ್ಚಿವೆ ಎಂದು ವರದಿಯಾಗಿದೆ. ಕಸಾಯಿಖಾನೆಗಳನ್ನು ಮುಚ್ಚುವ ಸರ್ಕಾರದ ಕ್ರಮದಿಂದಾಗಿ ಲಕ್ಷಾಂತರ ಮಂದಿ ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ ಎಂದು ಖುರೇಶಿ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಮೀನು ಮಾರಾಟಗಾರು ಕೂಡಾ ಪ್ರತಿಭಟನೆಯನ್ನು ಬೆಂಬಲಿಸಲಿದ್ದಾರೆ ಎಂದು ಖುರೇಶಿ ಹೇಳಿದ್ದಾರೆ.
ಸರ್ಕಾರವು ಕೇವಲ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಬಯಸುತ್ತದೆ, ಆದುದರಿಂದ ವರ್ತಕರು ಆತಂಕಗೊಳ್ಳಬೇಕೆಂದಿಲ್ಲವೆಂದು ಬಿಜೆಪಿ ನಾಯಕ ಮಝರ್ ಅಬ್ಬಾಸ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.