ಮಂಡ್ಯ, ಮೈಸೂರಿಗೂ ಕಾದಿದೆಯಾ ಜಲಪ್ರಳಯದ ಗಂಡಾಂತರ?

Published : Sep 26, 2018, 07:23 AM IST
ಮಂಡ್ಯ, ಮೈಸೂರಿಗೂ ಕಾದಿದೆಯಾ ಜಲಪ್ರಳಯದ ಗಂಡಾಂತರ?

ಸಾರಾಂಶ

ಕೆಆರ್ ಎಸ್, ಬೆಳಗೊಳ ಸೇರಿ ಸುತ್ತಮುತ್ತಲ ಭಾಗಗಳಲ್ಲಿ ಮಧ್ಯಾಹ್ನ 2.40 ರ ಸಮಯದಲ್ಲಿ ಎರಡು ಬಾರಿ ಭಾರೀ ಶಬ್ದ ಕೇಳಿಬಂದಿದೆ. ಕೆಲವರಿಗೆ ಮನೆಗಳಲ್ಲಿ ನಡುಗಿದಂತಹ ಅನುಭವವಾಗಿದ್ದು, ಅವರು ಮನೆ ಯಿಂದ ಹೊರಗೋಡಿ ಬಂದಿದ್ದಾರೆ. 

ಮಂಡ್ಯ : ಕೇರಳ, ಕೊಡಗು ಹಾಗೂ ಬೆಂಗಳೂರಿನಲ್ಲಿ ಭಯಾನಕ ಶಬ್ದ ಕೇಳಿಬಂದ ಬೆನ್ನಲ್ಲೇ ಮಂಗಳವಾರ ಮಂಡ್ಯ, ಮೈಸೂರಿನಲ್ಲಿ ಭಾರೀ ಶಬ್ಧ ಕೇಳಿಬಂದಿದೆ. ಕೆಆರ್ ಎಸ್, ಬೆಳಗೊಳ ಸೇರಿ ಸುತ್ತಮುತ್ತಲ ಭಾಗಗಳಲ್ಲಿ ಮಧ್ಯಾಹ್ನ 2.40 ರ ಸಮಯದಲ್ಲಿ ಎರಡು ಬಾರಿ ಭಾರೀ ಶಬ್ದ ಕೇಳಿಬಂದಿದೆ. ಕೆಲವರಿಗೆ ಮನೆಗಳಲ್ಲಿ ನಡುಗಿದಂತಹ ಅನುಭವವಾಗಿದ್ದು, ಅವರು ಮನೆ ಯಿಂದ ಹೊರಗೋಡಿ ಬಂದಿದ್ದಾರೆ. ಈ ಶಬ್ದ ಪ್ರಕೃತಿ ವಿಕೋಪದ ಮುನ್ಸೂಚನೆಯೇ ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.

ಕೊಡಗು, ಕೇರಳ, ಬೆಂಗಳೂರಿನಲ್ಲಿ ಈ ಹಿಂದೆ ಭಾರೀ ಶಬ್ದ ಕೇಳಿಬಂದಿತ್ತು. ಇದಾದ ಸ್ವಲ್ಪ ದಿನಗಳಲ್ಲಿ ಭಾರಿ ಮಳೆ ಸುರಿದು ಜನರಿಗೆ ಸಂಕಷ್ಟ ಎದುರಾಗಿತ್ತು. ಇದೀಗ ಮಂಡ್ಯದಲ್ಲಿ ಶಬ್ಧ ಕೇಳಿರುವುದು ಆತಂಕಕ್ಕೆ ಕಾರಣವಾಗಿದೆ. 1 ತಿಂಗಳ ಹಿಂದೆ ಬೆಂಗಳೂರಿನ  ರಾಜರಾಜೇಶ್ವರಿ ನಗರ ಭಾಗದಲ್ಲಿ ಭಾರಿ ಶಬ್ದ ಕೇಳಿ ಭೂಮಿ ನಡುಗಿದ ಅನುಭವವಾಗಿತ್ತು. ಈಗ ಭಾನು ವಾರರಾತ್ರಿ ರಾಜರಾಜೇಶ್ವರಿನಗರದಲ್ಲಿ 15ಸೆಂ.ಮೀ. ಮಳೆಯಾಗಿ ಜನರನ್ನು ಕಂಗಾಲು ಮಾಡಿತ್ತು. 

ಇದೇ ರೀತಿ ಕೊಡಗಿನಲ್ಲೂ ಆಗಿತ್ತು. ಮಹಾಮಳೆಗೆ ಮೊದಲು ಕೊಡಗಿನಲ್ಲಿ ಭಾರೀ ಶಬ್ಧ, ಭೂಕಂಪನ ಆಗಿತ್ತು. ಕಾಕತಾಳೀಯ ಎಂಬಂತೆ ಶಬ್ಧ ಕೇಳಿಬಂದ ಕೆಲ ದಿನಗಳಲ್ಲೇ ಭೀಕರ ಜಲಪ್ರಳಯ ಸಂಭವಿಸಿತ್ತು. ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ ಭಯಂಕರ ಶಬ್ದ ಕೇಳಿ ಬಂದಿದ್ದು, ಜಲ ದಿಗ್ಬಂಧನ ಉಂಟಾಗಿದೆ. ಪ್ರಸಕ್ತದಲ್ಲಿ ಹಿಮಾಚಲ ಪ್ರದೇಶದಲ್ಲಿ ವರುಣ ಅಬ್ಬರಿಸುತ್ತಿದ್ದು, ನೋಡ ನೋಡುತ್ತಿದ್ದಂತೆ ಕಣ್ಣೆದುರಿಗೆ ಬೆಟ್ಟಗುಡ್ಡಗಳು, ಮನೆಗಳು ಕುಸಿದು ಬೀಳುತ್ತಿವೆ. ಇಲ್ಲಿಯ ರಾವಿ ನದಿ ತುಂಬಿ ಹರಿಯುತ್ತಿದೆ. ನದಿ ಪ್ರವಾಹಕ್ಕೆ ಬಸ್ಸು, ಲಾರಿಗಳು ಕೊಚ್ಚಿ ಹೋಗಿವೆ. ಈ ಎಲ್ಲಾ ಘಟನೆಗಳನ್ನು ಹೋಲಿಸಿದಾಗ ಶಬ್ದಕ್ಕೂ ಮಹಾ ಮಳೆಗೂ ನಂಟಿರುವುದು ವೇದ್ಯವಾಗುತ್ತದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೂಪಾಯಿ ಕುಸಿದರೂ ಪ್ರಗತಿಯತ್ತ ಭಾರತ: ನಿಜಕ್ಕೂ ಏನಾಗುತ್ತಿದೆ?‌
87 ವರ್ಷದ ಪ್ರಸಿದ್ಧ ಪೇಂಟರ್ ಮಗುವಿಗೆ ತಾಯಿಯಾದ 37 ವರ್ಷದ ಪತ್ನಿ, ಉಳಿದ ಮಕ್ಕಳೊಂದಿಗೆ ಬಂಧವೇ ಕಟ್