
ಬೆಂಗಳೂರು(ನ.13): ಪ್ರಧಾನಮಂತ್ರಿ ನರೇಂದ್ರಮೋದಿ 500 ಮತ್ತು 1000 ರೂ. ಹಳೇ ನೋಟನ್ನ ನಿಷೇಧ ಮಾಡಿದ್ದೇ ತಡ ಕಾಳಧನಿಕರಿಗೆ ನಿದ್ದೆ ಬರುತ್ತಿಲ್ಲ. ಹಲವೆಡೆ ಹಣವನ್ನ ಸುಟ್ಟಿದ್ದನ್ನ, ಹರಿದು ಹಾಕಿದ ಸುದ್ಧಿಯನ್ನ ನೋಡಿದ್ದೇವೆ. ಇದೀಗ ಬೆಮಗಳೂರು ಸನಿಹದಲ್ಲೇ ಇಂಥದ್ದೊಂದು ಘಟನೆ ನಡೆದಿದೆ.
ಹೊಸಕೋಟೆ ಸಮೀಪದ ಎಲೆಮಲ್ಲಪ್ಪನ ಕೆರೆಗೆ 500, 1000 ನೋಟುಗಳನ್ನ ತಂದು ಸುರಿಯಲಾಗಿದೆ. ಪ್ರಭಾವಿ ವ್ಯಕ್ತಿಗೆ ಸೇರಿದ ಹಣವಿದು ಎನ್ನಲಾಗುತ್ತಿದ್ದು, ಪತ್ತೆಯಾದ ಹಣ ಖೋಟಾ ನೋಟು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಕೆರೆಯ ಸುತ್ತಮುತ್ತ ನೆರೆದಿರುವ ಜನ ಹಣ ಆಯ್ದುಕೊಳ್ಳಲು ಮುಗಿಬಿದ್ದಿದ್ದಾರೆ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪರಿಶೀಲನ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.