ಹೂಡಿಕೆ ಅವಕಾಶದ ರಾಜ್ಯಗಳು: ಕರ್ನಾಟಕದ ಸ್ಥಾನ 9ಕ್ಕೆ ಕುಸಿತ; ಗುಜರಾತ್ ಈಗಲೂ ನಂ.1

Published : Jul 19, 2017, 12:03 PM ISTUpdated : Apr 11, 2018, 12:35 PM IST
ಹೂಡಿಕೆ ಅವಕಾಶದ ರಾಜ್ಯಗಳು: ಕರ್ನಾಟಕದ ಸ್ಥಾನ 9ಕ್ಕೆ ಕುಸಿತ; ಗುಜರಾತ್ ಈಗಲೂ ನಂ.1

ಸಾರಾಂಶ

ಕಾರ್ಮಿಕ, ಮೂಲಸೌಕರ್ಯ, ಆರ್ಥಿಕ ಪರಿಸ್ಥಿತಿ, ಆಡಳಿತ, ರಾಜಕೀಯ ಸ್ಥಿರತೆ, ರಾಜ್ಯದ ಬಗ್ಗೆ ಇರುವ ಅಭಿಪ್ರಾಯ ಎಂಬ ಆರು ಮುಖ್ಯ ಅಂಶ ಹಾಗೂ 51 ಉಪಸೂಚ್ಯಂಕಗಳನ್ನು ಇಟ್ಟುಕೊಂಡು ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿ (ಎನ್‌ಸಿಎಇಆರ್) ಈ ರ್ಯಾಂಕಿಂಗ್ ಪಟ್ಟಿ ಸಿದ್ಧಪಡಿಸಿದೆ.

ನವದೆಹಲಿ: ಹೂಡಿಕೆ ಅವಕಾಶಗಳು ಹೆಚ್ಚಿರುವ ದೇಶದ 21 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದೆ. ಆದರೆ ಕರ್ನಾಟಕ 6ರಿಂದ 9ನೇ ಸ್ಥಾನಕ್ಕೆ ಜಾರಿದೆ. ಆದಾಗ್ಯೂ ಟಾಪ್-10ರಲ್ಲಿ ಸ್ಥಾನ ಉಳಿಸಿಕೊಂಡಿದೆ.

ಕಾರ್ಮಿಕ, ಮೂಲಸೌಕರ್ಯ, ಆರ್ಥಿಕ ಪರಿಸ್ಥಿತಿ, ಆಡಳಿತ, ರಾಜಕೀಯ ಸ್ಥಿರತೆ, ರಾಜ್ಯದ ಬಗ್ಗೆ ಇರುವ ಅಭಿಪ್ರಾಯ ಎಂಬ ಆರು ಮುಖ್ಯ ಅಂಶ ಹಾಗೂ 51 ಉಪಸೂಚ್ಯಂಕಗಳನ್ನು ಇಟ್ಟುಕೊಂಡು ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿ (ಎನ್‌ಸಿಎಇಆರ್) ಈ ರ್ಯಾಂಕಿಂಗ್ ಪಟ್ಟಿ ಸಿದ್ಧಪಡಿಸಿದೆ. ಗುಜರಾತ್ ಪ್ರಥಮ ಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿ ದೆಹಲಿ, 3ರಲ್ಲಿ ಆಂಧ್ರಪ್ರದೇಶ ಇದೆ. ನಂತರ ಹರ್ಯಾಣ (4), ತೆಲಂಗಾಣ (5), ತಮಿಳುನಾಡು (6), ಕೇರಳ (7), ಮಹಾರಾಷ್ಟ್ರ (8), ಕರ್ನಾಟಕ (9) ಹಾಗೂ ಮಧ್ಯಪ್ರದೇಶ (10) ಬರುತ್ತವೆ.

2016ರಲ್ಲಿ ಗುಜರಾತ್, ದೆಹಲಿ ಪ್ರಥಮ, ದ್ವಿತೀಯ ಸ್ಥಾನದಲ್ಲೇ ಇದ್ದವು. ಟಾಪ್ 10ರಲ್ಲೂ ಇರದ ಹರ್ಯಾಣ ಹಾಗೂ ತೆಲಂಗಾಣ ಈ ಬಾರಿ 10ರ ಪಟ್ಟಿಯೊಳಕ್ಕೆ ಸೇರ್ಪಡೆಗೊಂಡಿರುವುದರಿಂದ ಕರ್ನಾಟಕದಂತಹ ರಾಜ್ಯಗಳ ರ್ಯಾಂಕಿಂಗ್‌'ನಲ್ಲಿ ಏರುಪೇರಾಗಿದೆ.

ಬಿಹಾರ, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಪಟ್ಟಿಯಲ್ಲಿ ಹೂಡಿಕೆ ಅವಕಾಶಗಳು ಹೆಚ್ಚಿರುವ ರಾಜ್ಯಗಳ ಪಟ್ಟಿಯಲ್ಲಿ ಕಳಪೆ ಸಾಧನೆ ತೋರಿವೆ.

ಇದೇ ವೇಳೆ ಭ್ರಷ್ಟಾಚಾರ ಈಗಲೂ ಉದ್ಯಮಿಗಳಿಗೆ ನಂ.1 ಅಡ್ಡಗಾಲಾಗಿದೆ. ಉದ್ಯಮ ಸ್ಥಾಪಿಸಲು ಅನುಮತಿ ಪಡೆಯಲು ಪಡಬೇಕಾದ ಸಾಹಸ ಎರಡನೇ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

epaperkannadaprabha.com

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳು; ಕಾರು ನಿಲ್ಲಿಸಿ ಆಸ್ಪತ್ರೆಗೆ ಸೇರಿಸಿದ ಸಚಿವ ಪ್ರಿಯಾಂಕ್ ಖರ್ಗೆ!
BBK 12 Winner: 6 ತಿಂಗಳ ಹಿಂದೆ ಕಾಸಿಲ್ಲ- ಗಿಲ್ಲಿ ನಟನಿಗೆ ಈಗ ಹಣದ ಹೊಳೆ; ಕಿಚ್ಚ ಸುದೀಪ್‌ ಕೊಟ್ಟಿದ್ದೆಷ್ಟು?