ಬೆಂಗಳೂರು [ಆ.01]: ಐಎಂಎ ವಂಚಕ ಮನ್ಸೂರ್ ಅಲಿ ಖಾನ್ ಸದ್ಯ ಇಡಿ ಅಧಿಕಾರಿಗಳ ಬಳಿ ತಮಗೆ ಪ್ರಾಣಾಪಾಯ ಇರುವುದಾಗಿ ಆತಂಕ ತೋಡಿಕೊಂಡಿದ್ದಾರೆ.
ವಿಚಾರಣೆ ವೇಳೆ ಇಡಿ ಅಧಿಕಾರಿಗಳ ಮುಂದೆ ಪ್ರಭಾವಿಗಳ ಹೆಸರು ಹೇಳದ ಮನ್ಸೂರ್ ತನಗೆ ಇವರಿಂದ ಜೀವ ಭಯ ಇದೆ. ಹೆಸರು ಹೇಳಿದರೆ ಪ್ರಭಾವಿಗಳು ನನಗೆ ಅಪಾಯ ಮಾಡಬಹುದು ಎಂದು ಹೇಳಿದ್ದಾರೆ.
ಶಾರ್ಪ್ ಶೂಟರ್ಗಳಿಂದ ತಮ್ಮ ಮೇಲೆ ದಾಳಿ ನಡೆಸಬಹುದಾದ ಶಂಕೆ ಇದ್ದು, ಸುಪಾರಿ ಪಡೆದಿರುವ ಅವರು ಯಾವಾಗ ಬೇಕಾದರೂ ನನ್ನ ಪ್ರಾಣಕ್ಕೆ ಅಪಾಯ ತರಬಹುದು ಎಂದಿದ್ದಾರೆ.
IMA ವಂಚನೆ: ಮನ್ಸೂರ್ನಿಂದಲೇ ಎಸ್ ಐಟಿಗೆ ಸಿಕ್ಕಿದೆ ಮುಖ್ಯ ಸಾಕ್ಷಿ
ಜೀವ ಭಯದ ಆತಂಕ ತೋಡಿಕೊಂಡ ಹಿನ್ನೆಲೆ ಮನ್ಸೂರ್ ಖಾನ್ ಭದ್ರತೆಗಾಗಿ ಸಿಆರ್ ಪಿಎಫ್ ಪಡೆ ನಿಯೋಜಿಸಲಾಗಿದೆ. ಭದ್ರತೆಗಾಗಿ ಇಬ್ಬರು ಸಿಆರ್ ಪಿ ಎಫ್ ಇನ್ಸ್ ಪೆಕ್ಟರ್ ನೇತೃತ್ವದ 15 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.