ನಾಗನ ಬಂಧನದ ಕೊನೆಯ ಕ್ಷಣಗಳು ಹೇಗಿದ್ದವು?

Published : May 11, 2017, 11:57 AM ISTUpdated : Apr 11, 2018, 01:12 PM IST
ನಾಗನ ಬಂಧನದ ಕೊನೆಯ ಕ್ಷಣಗಳು ಹೇಗಿದ್ದವು?

ಸಾರಾಂಶ

ಪೊಲೀಸರು ಈ ಮೂವರನ್ನು ಬಂಧಿಸುವ ಮುನ್ನ ಸುಮಾರು ಒಂದೂವರೆ ಗಂಟೆ ಕಾಲ ಚೇಸ್ ಮಾಡಬೇಕಾಗುತ್ತದೆ. ಏಪ್ರಿಲ್ 14ರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ನಾಗ ಹಾಗೂ ಮಕ್ಕಳಾದ ಗಾಂಧಿ ಮತ್ತು ಶಾಸ್ತ್ರಿಯನ್ನು ಹಿಡಿಯಲು ಬಾಣಸವಾಡಿ ಎಸಿಪಿ ರವಿಕುಮಾರ್ ನೇತೃತ್ವದ ಪೊಲೀಸ್ ತಂಡವೊಂದನ್ನು ರಚಿಸಲಾಗಿತ್ತು.

ಬೆಂಗಳೂರು(ಮೇ 11): ಹೆಚ್ಚೂಕಡಿಮೆ ಒಂದು ತಿಂಗಳಿನಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದ ರೌಡಿ ನಾಗ ಕೊನೆಗೂ ಅರೆಸ್ಟ್ ಆಗಿದ್ದಾನೆ. ಇಂದು ತಮಿಳುನಾಡಿನ ವೇಲೂರಿನಲ್ಲಿ ಬೆಂಗಳೂರು ಪೊಲೀಸರ ತಂಡವೊಂದು ನಾಗ ಹಾಗೂ ಆತನ ಇಬ್ಬರು ಮಕ್ಕಳನ್ನು ಬಂಧಿಸಿದ್ದಾರೆ.

ಕೊನೆಯ ಕ್ಷಣಗಳು...
ಸುವರ್ಣನ್ಯೂಸ್'ಗೆ ಸಿಕ್ಕ ಮಾಹಿತಿ ಪ್ರಕಾರ, ಬಂಧನಕ್ಕೆ ಮುನ್ನ ಮಧ್ಯಾಹ್ನ 3:50ಕ್ಕೆ ನಾಗನ ಮಗ ಗಾಂಧಿಯು ನಾಗನ ವಕೀಲ ನರೇಶ್'ಗೆ ಫೋನ್ ಮಾಡಿದ್ದಾನೆ. ಪೊಲೀಸರು ಬರುತ್ತಿದ್ದಾರೆ, ಏನು ಮಾಡಲಿ ಎಂದು ಗಾಂಧಿ ಕೇಳುತ್ತಾನೆ. ಆಗ ವಕೀಲ ನರೇಶ್ ಅವರು ಪೊಲೀಸರಿಗೆ ಶರಣಾಗುವಂತೆ ಗಾಂಧಿಗೆ ಸೂಚಿಸುತ್ತಾರೆ. ಆದರೆ, ತಾವು ಸರೆಂಡರ್ ಆರೆ ಪೊಲೀಸರು ಸಾಯಿಸಿಬಿಡುತ್ತಾರೆ ಎಂದು ಭೀತಗೊಂಡು ಗಾಂಧಿಯು ಫೋನ್'ನಲ್ಲಿ ವಕೀಲರೊಂದಿಗೆ ಕಿರುಚಾಡಿದ್ದಾನೆ. ತಾವು ಪೊಲೀಸರಿಗೆ ಸಿಕ್ಕುವುದಿಲ್ಲ. ತಪ್ಪಿಸಿಕೊಳ್ಳುತ್ತೇವೆ ಎಂದು ಫೋನ್'ನಲ್ಲೇ ಹೇಳುತ್ತಾರೆ.

ಪೊಲೀಸರು ಈ ಮೂವರನ್ನು ಬಂಧಿಸುವ ಮುನ್ನ ಸುಮಾರು ಒಂದೂವರೆ ಗಂಟೆ ಕಾಲ ಚೇಸ್ ಮಾಡಬೇಕಾಗುತ್ತದೆ. ಏಪ್ರಿಲ್ 14ರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ನಾಗ ಹಾಗೂ ಮಕ್ಕಳಾದ ಗಾಂಧಿ ಮತ್ತು ಶಾಸ್ತ್ರಿಯನ್ನು ಹಿಡಿಯಲು ಬಾಣಸವಾಡಿ ಎಸಿಪಿ ರವಿಕುಮಾರ್ ನೇತೃತ್ವದ ಪೊಲೀಸ್ ತಂಡವೊಂದನ್ನು ರಚಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌