ಲಾಲು ಆರೋಗ್ಯದಲ್ಲಿ ದಿಢೀರ್‌ ಏರುಪೇರು

By Web DeskFirst Published Nov 19, 2018, 9:07 AM IST
Highlights

ಜೈಲು ಶಿಕ್ಷೆಗೆ ಗುರಿಯಾಗಿ ಅನಾರೋಗ್ಯದಿಂದ ರಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಯಾದವ್‌ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ವೈದ್ಯರು ಹೇಳಿದ್ದಾರೆ. 

ರಾಂಚಿ: ಬಹುಕೋಟಿ ಹಗರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಅನಾರೋಗ್ಯದಿಂದ ರಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಯಾದವ್‌ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ವೈದ್ಯರು ಹೇಳಿದ್ದಾರೆ. 

ಲಾಲು ಅವರ ಬಲಗಾಲಿನಲ್ಲಾದ ಗಾಯದಿಂದ ಹೊರಬರುತ್ತಿರುವ ಕೀವಿನಿಂದಾಗಿ ಅವರ ಆರೋಗ್ಯ ಕ್ಷೀಣಿಸುತ್ತಿದೆ ಎಂದು ರಿಮ್ಸ್‌ ವೈದ್ಯ ಡಾ. ಉಮೇಶ್‌ ಪ್ರಸಾದ್‌ ಹೇಳಿದ್ದಾರೆ. ‘ಇದ್ದಕ್ಕಿದ್ದಂತೆಯೇ ಲಾಲು ಅವರಲ್ಲಿ ದೇಹದಲ್ಲಿ ಸಕ್ಕರೆ ಅಂಶ ಮತ್ತು ರಕ್ತದ ಒತ್ತಡ ಹೆಚ್ಚಾಗಿದೆ. 

ಹೀಗಾಗಿ ಅವರಿಗೆ ನೀಡುವ ಇನ್ಸುಲಿನ್‌ ಪ್ರಮಾಣ ಹೆಚ್ಚಿಸಲಾಗಿದೆ. ಬಲಗಾಲಿನ ಗಾಯದಿಂದ ಕೀವು ಸೋರುವಿಕೆ ಹೆಚ್ಚಾಗಿದ್ದು, ಅವರಿಗೆ ನಿಲ್ಲಲು ಮತ್ತು ಶೌಚಾಲಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ,’ ಎಂದು ಹೇಳಿದ್ದಾರೆ.

click me!