ಫೇಸ್‌ಬುಕ್‌ ಮೂಲಕ ಯುವಕರಿಗೆ ಗಾಳ: ಉಗ್ರ ಮಹಿಳೆ ಬಂಧನ

Published : Nov 19, 2018, 08:37 AM IST
ಫೇಸ್‌ಬುಕ್‌ ಮೂಲಕ ಯುವಕರಿಗೆ ಗಾಳ: ಉಗ್ರ ಮಹಿಳೆ ಬಂಧನ

ಸಾರಾಂಶ

ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸುಂಬಲ್‌ ಪ್ರದೇಶ ಶಾಜಿಯಾ, ಎಂಬಾಕೆ ಫೇಸ್‌ಬುಕ್‌ ಮೂಲಕವೇ ಯುವಕರನ್ನು ಸಂಪರ್ಕಿಸುತ್ತಿದ್ದಳು. ಜೊತೆಗೆ ಯುವಕರಿಗೆ ಜಿಹಾದಿ ಕೃತ್ಯಗಳಲ್ಲಿ ಭಾಗಿಯಾಗುವಂತೆ ಮತ್ತು ಶಸ್ತ್ರಾಸ್ತ್ರ ಹೋರಾಟದಲ್ಲಿ ಭಾಗಿಯಾಗುವಂತೆ ಉತ್ತೇಜಿಸುತ್ತಿದ್ದಳು. ಆಕೆಯ ಈ ನಡೆಯ ಬಗ್ಗೆ ಹಲವು ದಿನಗಳಿಂದ ನಿಗಾ ಇಟ್ಟಿದ್ದ ಪೊಲೀಸರು, ಇದೀಗ ಆಕೆಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆಕೆ ಹೆಚ್ಚಿನ ಮಾಹಿತಿ ಹೊರಗೆಡವಿಲ್ಲವಾದರೂ, ಅನಂತ್‌ನಾಗ್‌ ಜಿಲ್ಲೆಯ ಇಬ್ಬರು ಯುವಕರಿಗೆ ಶಸ್ತ್ರಾಸ್ತ್ರ ನೀಡಿದ್ದ ಮಾಹಿತಿಯನ್ನು ನೀಡಿದ್ದಾಳೆ. ಈ ಪೈಕಿ ಒಬ್ಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀನಗರ[ನ.19]: ಕಾಶ್ಮೀರಿ ಯುವಕರನ್ನು ಉಗ್ರವಾದದತ್ತ ಸೆಳೆಯಲು ನಾನಾ ತಂತ್ರ ಅನುಸರಿಸುವ ಭಯೋತ್ಪಾದಕ ಸಂಘಟನೆಗಳು ಇದೀಗ, ಮಹಿಳೆಯರ ಮೂಲಕ ಇಂಥ ಕೆಲಸ ಸಾಧಿಸಿಕೊಳ್ಳುತ್ತಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಇಂಥದ್ದೇ ಕೃತ್ಯದಲ್ಲಿ ತೊಡಗಿದ್ದ 30 ವರ್ಷದ ಕಾಶ್ಮೀರಿ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸುಂಬಲ್‌ ಪ್ರದೇಶ ಶಾಜಿಯಾ, ಎಂಬಾಕೆ ಫೇಸ್‌ಬುಕ್‌ ಮೂಲಕವೇ ಯುವಕರನ್ನು ಸಂಪರ್ಕಿಸುತ್ತಿದ್ದಳು. ಜೊತೆಗೆ ಯುವಕರಿಗೆ ಜಿಹಾದಿ ಕೃತ್ಯಗಳಲ್ಲಿ ಭಾಗಿಯಾಗುವಂತೆ ಮತ್ತು ಶಸ್ತ್ರಾಸ್ತ್ರ ಹೋರಾಟದಲ್ಲಿ ಭಾಗಿಯಾಗುವಂತೆ ಉತ್ತೇಜಿಸುತ್ತಿದ್ದಳು. ಆಕೆಯ ಈ ನಡೆಯ ಬಗ್ಗೆ ಹಲವು ದಿನಗಳಿಂದ ನಿಗಾ ಇಟ್ಟಿದ್ದ ಪೊಲೀಸರು, ಇದೀಗ ಆಕೆಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆಕೆ ಹೆಚ್ಚಿನ ಮಾಹಿತಿ ಹೊರಗೆಡವಿಲ್ಲವಾದರೂ, ಅನಂತ್‌ನಾಗ್‌ ಜಿಲ್ಲೆಯ ಇಬ್ಬರು ಯುವಕರಿಗೆ ಶಸ್ತ್ರಾಸ್ತ್ರ ನೀಡಿದ್ದ ಮಾಹಿತಿಯನ್ನು ನೀಡಿದ್ದಾಳೆ. ಈ ಪೈಕಿ ಒಬ್ಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಗ್ರೆನೇಡ್‌ಗಳನ್ನು ಸಾಗಿಸುತ್ತಿದ್ದ ಆಸಿಯಾ ಎಂಬ ಮಹಿಳೆಯೊಬ್ಬಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದವು. ಈ ಮೂಲಕ ಶಸ್ತ್ರಾಸ್ತ್ರ ಸಾಗಣೆಗೆ ಉಗ್ರರು, ಮಹಿಳೆಯರ ನೆರವು ಪಡೆಯುತ್ತಿರುವ ವಿಷಯ ಬೆಳಕಿಗೆ ಬಂದಿತ್ತು. ಅದರ ಬೆನ್ನಲ್ಲೇ ಶಾಜಿಯಾ ಪ್ರಕರಣ ಬೆಳಕಿಗೆ ಬಂದಿದೆ.

ಅಚ್ಚರಿ ವಿಷಯವೆಂದರೆ ಹೀಗೆ ಹಿಜ್ಬುಲ್‌ ಉಗ್ರರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಜಿಯಾ, ಕೆಲ ಹಿರಿಯ ಪೊಲೀಸ್‌ ಅಧಿಕಾರಿಗಳ ಜೊತೆಗೂ ನಂಟು ಹೊಂದಿದ್ದ ವಿಷಯವೂ ಬೆಳಕಿಗೆ ಬಂದಿದೆ. ಉಗ್ರರ ಬಂಧನಕ್ಕೆ ನೆರವಾಗುವ ನೆಪ ಹೇಳಿ, ಈಕೆ ಕೆಲ ಹಿರಿಯ ಪೊಲೀಸ್‌ ಅಧಿಕಾರಿಗಳಿಂದ ಗೌಪ್ಯ ಮಾಹಿತಿ ಸಂಗ್ರಹಿಸಿ ಅದನ್ನು ಉಗ್ರ ಸಂಘಟನೆಗಳಿಗೆ ನೀಡುತ್ತಿದ್ದಳು ಎನ್ನಲಾಗಿದೆ. ಹೀಗಾಗಿ ಆಕೆಯ ನಂಟು ಹೊಂದಿರುವ ಪೊಲೀಸರ ಬಗ್ಗೆಯೂ ತನಿಖೆ ಆರಂಭಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಪಹಲ್ಗಾಂ ಉಗ್ರ ದಾಳಿ: ಕೋರ್ಟ್‌ಗೆ 1597 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ
Vote Chori Row: 'ನಿಮ್ಮ ಮನಸಿಗೆ ಏನಾಗಿದೆ?..' ಪ್ರತಿಪಕ್ಷಗಳಿಗೆ ದೇವೇಗೌಡ ಎಚ್ಚರಿಕೆ