ಜಂತಕಲ್ ಸಂಕಷ್ಟದಲ್ಲಿರುವ ಎಚ್'ಡಿಕೆಗೆ ಸದ್ಯಕ್ಕೆ ರಿಲೀಫ್!

Published : May 18, 2017, 08:16 AM ISTUpdated : Apr 11, 2018, 01:12 PM IST
ಜಂತಕಲ್ ಸಂಕಷ್ಟದಲ್ಲಿರುವ ಎಚ್'ಡಿಕೆಗೆ ಸದ್ಯಕ್ಕೆ ರಿಲೀಫ್!

ಸಾರಾಂಶ

ಜಂತಕಲ್​​ ಅಕ್ರಮ ಗಣಿಗಾರಿಕೆ ಕೇಸಲ್ಲಿ ಬಂಧನ ಭೀತಿಗೆ ಒಳಗಾಗಿದ್ದ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಕುಮಾರಸ್ವಾಮಿ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ 7 ದಿನಗಳ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ಹಿನ್ನಲೆಯಲ್ಲಿ  ಇವತ್ತು  ಎಚ್​ಡಿ ಕುಮಾಸ್ವಾಮಿ ಎಸ್​ಐಟಿ ಮುಂದೆ ಹಾಜರಾಗಿ  ವಿಚಾರಣೆ  ಎದುರಿಸಲಿದ್ದಾರೆ.

ಬೆಂಗಳೂರು(ಮೇ.18): ಜಂತಕಲ್​​ ಅಕ್ರಮ ಗಣಿಗಾರಿಕೆ ಕೇಸಲ್ಲಿ ಬಂಧನ ಭೀತಿಗೆ ಒಳಗಾಗಿದ್ದ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಕುಮಾರಸ್ವಾಮಿ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ 7 ದಿನಗಳ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ಹಿನ್ನಲೆಯಲ್ಲಿ  ಇವತ್ತು  ಎಚ್​ಡಿ ಕುಮಾಸ್ವಾಮಿ ಎಸ್​ಐಟಿ ಮುಂದೆ ಹಾಜರಾಗಿ  ವಿಚಾರಣೆ  ಎದುರಿಸಲಿದ್ದಾರೆ.

ಆರೋಪಿಯಿಂದ ಸಾಕಷ್ಟುಮಾಹಿತಿ ಪಡೆದುಕೊಳ್ಳಬೇಕಿದೆ. ಒಂದು ವೇಳೆ  ಜಾಮೀನು ನೀಡಿದರೆ  ಆರೋಪಿ ತನಿಖೆಗೆ ಹಾಜರಾಗುವುದಿಲ್ಲ. ಅಲ್ಲದೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಹೀಗಾಗಿ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸರ್ಕಾರ ಪರ ವಕೀಲರು ವಾದಿಸಿದ್ದರು. ಅಂತಿಿಮವಾಗಿ ಕೋರ್ಟ್ 7 ದಿನ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ  ಸರ್ಕಾರಿ ಪರ ವಕೀಲರಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.

ಕೊನೆಗೂ ಸಮನ್ಸ್​​ ಕೈ ಸೇರಿರುವ ಬಗ್ಗೆ ಒಪ್ಪಿಕೊಂಡಿರುವ ಎಚ್​ಡಿಕೆ ಇವತ್ತು ಎಸ್​​ಐಟಿ ತನಿಖಾಧಿಕಾರಿ ಮುಂದೆ ಹಾಜರಾಗಲಿದ್ದಾರೆ. ನನ್ನನ್ನು ರಾಜಕೀಯವಾಗಿ ಹಣಿಯಲು ಸರ್ಕಾರ ಕುತಂತ್ರ ನಡೆಸಿದೆ. ಯಾರೆಲ್ಲಾ ನನ್ನ ವಿರುದ್ಧ ಸಂಚು ರೂಪಿಸುತ್ತಿದ್ದಾರೆ ಎಂಬುದು ನನಗೆ ಗೊತ್ತು ಅಂತ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಜಂತಕಲ್ ಮೈನಿಂಗ್ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್​ 3 ತಿಂಗಳೊಳಗೆ ತನಿಖೆ ಮುಗಿಸುವಂತೆ ಸೂಚನೆ ನೀಡಿದ್ದು, ಎಸ್'​ಐಟಿ ತನಿಖೆಗೆ ಮುಂದಾಗಿದೆ. ಆದರೆ ಕಳೆದ 7 ವರ್ಷದಿಂದ ಎಸ್​ಐಟಿ ಏನು ಮಾಡುತ್ತಿತ್ತು ಅನ್ನೋದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್​ ಹೆಗ್ಡೆ ಪ್ರಶ್ನೆ.

ಎಚ್​​ಡಿಕೆ ವಿರುದ್ಧದ ಆರೋಪಗಳ ಬಗ್ಗೆ ಇನ್ನಷ್ಟು ಆಕ್ಷೇಪಣೆ ಸಲ್ಲಿಸಲು ಸರ್ಕಾರ ಪರ ವಕೀಲರು ನಿರ್ಧರಿಸಿದ್ದು ಮುಂದಿನ ವಿಚಾರಣೆ ವೇಳೆ ಕೋರ್ಟ್​​ಗೆ ಸಲ್ಲಿಸಲಿದ್ದಾರೆ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ್ರೇ ಸಾವಿರ ವರ್ಷ ಆಯಸ್ಸು ಅನ್ನೋ ಹಾಗೆ ತಾತ್ಕಲಿಕ ರಿಲೀಫ್​ ಹೆಚ್​ಡಿಕೆಗೆ ಬಂಧನ ಭೂತವನ್ನ ಓಡಿಸಿದೆ. ಆದರೆ ಮುಂದೇನಾಗುತ್ತದೆ ಎನ್ನುವುದೇ ಕುತೂಹಲ ಕೆರಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಲಿತರ ಭಕ್ತಿಯಿಂದ ಬ್ರಾಹ್ಮಣರಿಗೆ ಲಾಭ: ಹೋಮ-ಹವನ ಸಂಸ್ಕೃತಿ ಬಗ್ಗೆ KN ರಾಜಣ್ಣ ಪ್ರಶ್ನೆ
ತೆರಿಗೆ ಕಟ್ಟದೆಯೇ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? ಈ ಮಿತಿ ಮೀರಿದರೆ ಗಂಡಾಂತರ!