ಒಂದೇ ದಿನ 3 ಪುಸ್ತಕ, ಸಾವಣ್ಣ ಪ್ರಕಾಶನ ಹೊಸ ಸಾಹಸ

Published : Sep 27, 2018, 03:25 PM ISTUpdated : Sep 27, 2018, 03:45 PM IST
ಒಂದೇ ದಿನ 3 ಪುಸ್ತಕ, ಸಾವಣ್ಣ ಪ್ರಕಾಶನ ಹೊಸ ಸಾಹಸ

ಸಾರಾಂಶ

ಆಧುನಿಕ ಕನ್ನಡ ಪುಸ್ತಕಗಳ ಪ್ರಕಟಣೆಯಲ್ಲಿ ಹೊಸ ಕ್ರಾಂತಿಯನ್ನೇ ಮಾಡಿರುವ ಸಾವಣ್ಣ ಪ್ರಕಾಶನದಿಂದ ಮತ್ತೆ ಮೂರು ಪುಸ್ತಕಗಳು ಲೋಕಾರ್ಪಣೆಯಾಗಲಿವೆ. ಹಾಗಾದರೆ ಈ ಬಾರಿ ಒಂದಲ್ಲ ಮೂರು ಪುಸ್ತಕಗಳು ಕನ್ನಡಿಗರ ಕೈಗೆ ಲಭ್ಯವಾಗುತ್ತಿದೆ.

ಬೆಂಗಳೂರು(ಸೆ.27) ಸಾವಣ್ಣ ಪುಸ್ತಕ ಪ್ರಕಾಶನದಿಂದ ಮೂರು ಪುಸ್ತಕಗಳು ಏಕಕಾಲದಲ್ಲಿ ಲೋಕಾಪರ್ಣೆಯಾಗಲಿವೆ. ಭಾರತಿ ಬಿವಿ ವಿರಚಿತ 'ಜಸ್ಟ್‌ ಮಾತ್‌ ಮಾತಲ್ಲಿ' ರಂಗರಾಜ ಚಕ್ರವರ್ತಿ ಬರೆದಿರುವ 'ಜಿಲೇಬಿ'  ಮೇಘನಾ ಸುಧೀಂದ್ರ ಅವರ 'ಜಯನಗರದ ಹುಡುಗಿ' ಪುಸ್ತಕಗಳು ಲೋಕಾರ್ಪಣೆಯಾಗಲಿವೆ.

ಪದ್ಮಶ್ರೀ ಪುರಸ್ಕೃತ ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಪುಸ್ತಕಗಳ ಬಿಡುಗಡೆ ಮಾಡಲಿದ್ದಾರೆ.  ಪ್ರಣಯರಾಜ ಶ್ರೀನಾಥ್ ಮತ್ತು ಸುವರ್ಣ ನ್ಯೂಸ್.ಕಾಂ ಕನ್ನಡ ಡಿಜಿಟಲ್ ವಿಭಾಗದ ಪ್ರಧಾನ ಸಂಪಾದಕ ಎಸ್.ಕೆ.ಶಾಮಸುಂದರ್ ಮುಖ್ಯ ಅತಿಥಿಗಳಾಗಿ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

ಜಯನಗರ 7 ನೇ ಬ್ಲಾಕ್ ನ ನ್ಯಾಷನಲ್ ಕಾಲೇಜು ಆವರಣದ ಎಚ್.ಎನ್.ಕಲಾಕ್ಷೇತ್ರದಲ್ಲಿ ಸೆಪ್ಟೆಂಬರ್ 30 ಭಾನುವಾರ ಬೆಳಗ್ಗೆ 10.30ಕ್ಕೆ ಪುಸ್ತಕಗಳು ಲೋಕಾರ್ಪಣೆಯಾಗಲಿದ್ದು ಸಾಹಿತ್ಯ ಆಸಕ್ತರಿಗೆ ಒಂದು  ಸುವರ್ಣ ಅವಕಾಶ ಇಲ್ಲಿದೆ ಮಿಸ್ ಮಾಡಿಕೊಳ್ಳಬೇಡಿ. ಕಲಾಕ್ಷೇತ್ರಕ್ಕೆ ಮಾರ್ಗಸೂಚಿ ಇಲ್ಲಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ