ತ್ರಿಪುರ ಅನಾನಸ್ ಶೀಘ್ರದಲ್ಲೇ ವಿಶ್ವ ಮಾರುಕಟ್ಟೆಗೆ : ರಾಷ್ಟ್ರಪತಿ ಘೋಷಣೆ

Published : Jun 08, 2018, 05:25 PM ISTUpdated : Jun 08, 2018, 06:07 PM IST
ತ್ರಿಪುರ ಅನಾನಸ್ ಶೀಘ್ರದಲ್ಲೇ ವಿಶ್ವ ಮಾರುಕಟ್ಟೆಗೆ  : ರಾಷ್ಟ್ರಪತಿ ಘೋಷಣೆ

ಸಾರಾಂಶ

 ತ್ರಿಪುರಾದಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಂಡಿರುವ ಅನಾನಸ್  ನೆರೆಯ ರಾಷ್ಟ್ರಗಳಲ್ಲದೆ ವಿಶ್ವದ ಮಾರುಕಟ್ಟೆಯಲ್ಲೂ ರುಚಿ ನೋಡುವ ದಿನಗಳು ಶೀಘ್ರದಲ್ಲೇ ಬರಲಿದೆ ಎಂದು ರಾಷ್ಟ್ರಪತಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.   

ಅಗರ್ತಲಾ[ಜೂ.08]:  ಸ್ವಾದಿಷ್ಟ ರುಚಿ ಹಾಗೂ ಆರೋಗ್ಯಕ್ಕೆ ಪೂರಕವನ್ನು ಉಂಟು ಮಾಡುವ ಅನಾನಸ್ ಶೀಘ್ರದಲ್ಲೆ ವಿಶ್ವ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆಯಲಿದೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ತಿಳಿಸಿದ್ದಾರೆ. 

ಎರಡು ದಿನಗಳ ತ್ರಿಪುರ ರಾಜ್ಯ ಭೇಟಿಗೆ ಆಗಮಿಸಿದ್ದ ಅವರು ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಹೆಚ್ಚು ಬೆಳೆಯುವ ಅನಾನಸ್  ಅಂತರರಷ್ಟ್ರೀಯ ವಾಣಿಜ್ಯ ವಹಿವಾಟಿಗೆ ಸಂಪರ್ಕ ಕಲ್ಪಿಸಲು ಹೆಚ್ಚು ನೆರವಾಗುತ್ತದೆ ಎಂದು ತಿಳಿಸಿದರು.

ನೆರೆಯ ಬಾಂಗ್ಲಾದೇಶದಲ್ಲಿ ಅನಾನಸ್ ಉತ್ತಮ ವಹಿವಾಟಿನ ವಾಣಿಜ್ಯ ಬೆಳೆಗಳಲ್ಲಿ ಒಂದಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಬಾಂಗ್ಲಾದೇಶ ಮಾತ್ರವಲ್ಲದೆ ವಿಶ್ವದ ಇತರ ದೇಶಗಳು ನಮ್ಮದೇಶದ ಹಣ್ಣಿನ ರುಚಿ ನೋಡುವ ದಿನಗಳು ಶೀಘ್ರದಲ್ಲೇ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.   

ಎರಡು ದಿನಗಳ ಭೇಟಿಯಲ್ಲಿ ತ್ರಿಪುರ ಸುಂದರಿ ದೇವಾಸ್ಥಾನ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಿದರು. ತ್ರಿಪುರ ಸುಂದರಿ ದೇಗುಲವನ್ನು  ದೇಶದ ಪ್ರಮುಖ 51 ಶಕ್ತಿಪೀಠಗಳಲ್ಲಿ ಪ್ರಮುಖವಾದುದೆಂದು ಬಣ್ಣಿಸಿದರು. ತ್ರಿಪುರ ರಾಜ್ಯ ಕೆಲವೇ ತಿಂಗಳಲ್ಲಿ ದುಬೈ ರಾಜ್ಯಕ್ಕೆ ಟನ್'ಗಟ್ಟಲೆ ಅನಾನಸ್ ಹಣ್ಣನ್ನು ರಫ್ತು ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!