ಇವಿಎಂ ಬಗ್ಗೆ ಭವಿಷ್ಯ ನುಡಿದಿದ್ದಾರೆ ಕೋಡಿ ಶ್ರೀಗಳು

Published : Jan 07, 2018, 07:32 PM ISTUpdated : Apr 11, 2018, 12:40 PM IST
ಇವಿಎಂ ಬಗ್ಗೆ ಭವಿಷ್ಯ ನುಡಿದಿದ್ದಾರೆ ಕೋಡಿ ಶ್ರೀಗಳು

ಸಾರಾಂಶ

ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೆ  ಭವಿಷ್ಯ ನುಡಿದಿದ್ದಾರೆ.  

ಬೆಂಗಳೂರು (ಜ.07): ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೆ  ಭವಿಷ್ಯ ನುಡಿದಿದ್ದಾರೆ.  

ನಾನು ಒಂದು ವರ್ಷದಿಂದ ನುಡಿದ ಭವಿಷ್ಯವಾಣಿ ಸತ್ಯವಾಗಿದೆ. ನಾನು ಇದನ್ನ ಇಲ್ಲಿವರೆಗೂ ಅರ್ಥ ಹೇಳಿರಲಿಲ್ಲ.  ನಾನು ನುಡಿದ ಭವಿಷ್ಯ ಕರ್ನಾಟಕ ರಾಜಕೀಯದ ಮೇಲೂ ಪ್ರಭಾವ ಬೀರಲಿದೆ ಎಂದಿದ್ದಾರೆ.

ಮತ ಯಂತ್ರದಲ್ಲಿ ಯಾರಿಗೋ  ಓಟು ಹಾಕಿದ್ರೆ ಇನ್ಯಾರಿಗೋ ಹೋಗುತ್ತದೆ. ಈ ಹಿನ್ನೆಲೆಯಲ್ಲೇ  ಬಿತ್ತಿದ  ಬೆಳಸು  ಪರರು ಕುಯ್ದಾರು.  ಬಿತ್ತಿದ ಬೀಜ ಒಂದು, ಫಸಲು ಇನ್ನೊಂದು ಅಂತ ಕಾಲಜ್ಞಾನ ನುಡಿದಿದ್ದೆ.  ಗುಜರಾತ್ ,ಯುಪಿಯಲ್ಲೂ ಅದೇ ಆಯ್ತು, ಇಲ್ಲೂ ಕೂಡ ಅದೇ ಆಗುತ್ತೆ.  ಸರ್ಕಾರ ಈಗಲೇ ಎಚ್ಚೆತ್ತುಗೊಳ್ಳಬೇಕು. ಜನರ ಮನಸ್ಸಿನಲ್ಲಿರುವ  ಸಂಶಯವನ್ನ ಆಳುವವರು ನೀಗಿಸಬೇಕು. ಮತಯಂತ್ರವನ್ನು  ಪರಿಶೀಲನೆಗೆ  ಒಳಪಡಿಸಿದರೆ  ನಿಜವಾದ ಪ್ರಜಾಪ್ರಭುತ್ವ ‌ಸಿಗುತ್ತದೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಕುಂಭ ರಾಶಿಗೆ ಗುರು ಬಂದರೆ ಉತ್ತಮ ಮಳೆ ಬರುತ್ತದೆ.  ಕೆರೆ ಕಟ್ಟೆ ತುಂಬುತ್ತವೆ. ಧನುಸ್ಸು ರಾಶಿಗೆ  ಗುರು ಬಂದರೆ ಜಗ ತಳಮಳಗೊಳ್ಳುವುದು.  ಗಡಿಯಲ್ಲಿ ಯುದ್ಧದ ಭಯದ ವಾತಾವರಣ ಉಂಟಾಗುವುದು. ಸುಖ ದುಃಖ ಸಮನಾಗಿ ತೂಗ್ಯಾವು ಎಂದು ಚೆನ್ನರಾಯಪಟ್ಟಣ ಕತ್ತರಿಘಟ್ಟದ ಮೆಳಿಯಮ್ಮ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಕೋಡಿ ಶ್ರೀಗಳು ಭವಿಷ್ಯ  ನುಡಿದಿದ್ದಾರೆ.

  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಹಸ್ಯ ಡಿನ್ನರ್ ಮೀಟಿಂಗ್‌ನಲ್ಲಿ 'ಅಹಿಂದ' ಮಾಸ್ಟರ್ ಪ್ಲಾನ್! ಸಿಎಂ ಕುರ್ಚಿ ಉಳಿಸಿಕೊಳ್ಳಲು ಬೆಳಗಾವಿಯಲ್ಲಿ ಹೊಸ ರಣತಂತ್ರ?
India News Live: ಅಣುವಲಯ ಇನ್ನು ಖಾಸಗಿಗೂ ಮುಕ್ತ : ‘ಶಾಂತಿ’ ಮಸೂದೆಗೆ ಅನುಮೋದನೆ