ಸಿಎಂಗೆ ಮಾನ ಮರ್ಯಾದೆ ಇದ್ದಿದ್ದರೆ ರಾಜಿನಾಮೆ ಕೊಡುತ್ತಿದ್ದರು: ನಳೀನ್ ಕುಮಾರ್

Published : Jan 07, 2018, 06:33 PM ISTUpdated : Apr 11, 2018, 12:56 PM IST
ಸಿಎಂಗೆ ಮಾನ ಮರ್ಯಾದೆ ಇದ್ದಿದ್ದರೆ ರಾಜಿನಾಮೆ ಕೊಡುತ್ತಿದ್ದರು: ನಳೀನ್ ಕುಮಾರ್

ಸಾರಾಂಶ

ರಾಜ್ಯ ಸರ್ಕಾರದ  ಆಡಳಿತ ವೈಫಲ್ಯದಿಂದ  ಕಾನೂನು ಸುವ್ಯವಸ್ಥೆ  ಹದಗೆಟ್ಟಿದ್ದು  ಪರಿಣಾಮವಾಗಿ ಕರಾವಳಿ ಜಿಲ್ಲೆಯಲ್ಲಿ  ಭಯಾನಕ ವಾತಾವರಣ ನಿರ್ಮಾಣವಾಗಿದೆ. ಬಶೀರ್‍ ಕೊಲೆ ಹೇಯ ಕೃತ್ಯವನ್ನು ಖಂಡಿಸುತ್ತೇನೆ. ಬಶೀರ್‍ ಆತ್ಮಕ್ಕೆ ಶಾಂತಿ ಸಿಗಲಿ. ಎಲ್ಲರಿಗೂ ಬದುಕುವ ಹಕ್ಕಿದೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಉಡುಪಿ (ಜ.07):  ರಾಜ್ಯ ಸರ್ಕಾರದ  ಆಡಳಿತ ವೈಫಲ್ಯದಿಂದ  ಕಾನೂನು ಸುವ್ಯವಸ್ಥೆ  ಹದಗೆಟ್ಟಿದ್ದು  ಪರಿಣಾಮವಾಗಿ ಕರಾವಳಿ ಜಿಲ್ಲೆಯಲ್ಲಿ  ಭಯಾನಕ ವಾತಾವರಣ ನಿರ್ಮಾಣವಾಗಿದೆ. ಬಶೀರ್‍ ಕೊಲೆ ಹೇಯ ಕೃತ್ಯವನ್ನು ಖಂಡಿಸುತ್ತೇನೆ.  ಬಶೀರ್‍ ಆತ್ಮಕ್ಕೆ ಶಾಂತಿ ಸಿಗಲಿ. ಎಲ್ಲರಿಗೂ ಬದುಕುವ ಹಕ್ಕಿದೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ರಾಜ್ಯ ಸರ್ಕಾರ ಬಶೀರ್‍ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಕೊಡಬೇಕು.  ರಾಜ್ಯದಲ್ಲಿ ಗೂಂಡಾಗಿರಿ ಮತ್ತೊಮ್ಮೆ ತಾಂಡವವಾಡುತ್ತಿದೆ.  ದರೋಡೆಕೋರರು ಸಕ್ರೀಯರಾಗಿದ್ದರೆ  ಮತಾಂಧ  ಶಕ್ತಿಗಳು ಎಚ್ಚೆತ್ತುಕೊಂಡಿವೆ.  ಕಾನೂನು ಸುವ್ಯವಸ್ಥೆ  ವೈಫಲ್ಯವೇ  ಕಾರಣ. ಮುಖ್ಯಮಂತ್ರಿಗಳ ದುರಂಹಕಾರ ಆಡಳಿತ, ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲದೇ ಇರುವುದೇ ಇವೆಲ್ಲಕ್ಕೂ ಕಾರಣ ಎಂದು ನಳೀನ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸಿಎಂಗೆ ಮಾನ ಮರ್ಯಾದೆ ಇದ್ದಿದ್ದರೆ  ರಾಜಿನಾಮೆ ಕೊಡುತ್ತಿದ್ದರು.  ನಮಗೆ ಸರ್ಕಾರದ ಮೇಲೆ ನಿರೀಕ್ಷೆ ಇಲ್ಲ.  ರಮಾನಾಥ ರೈಗೆ ಸೋಲಿನ ಭಯ ಕಾಡಿದೆ.  ಭಯದ ಪರಿಣಾಮ ಮತಬ್ಯಾ‍ಂಕ್ ಮಾಡುತ್ತಿದ್ದಾರೆ.  ಸಿಎಂಗೆ ಕಿವಿ ಚುಚ್ಚುವ ಕೆಲಸ ಇಂದು ಮಾಡಿದ್ದಾರೆ.  ರಮಾನಾಥ ರೈ ಬಾಯಿಗೆ ಬಂದಾಗೆ ಹೇಳುವುದು ನೋಡಿದ್ರೆ ಅವರ ರಾಜಕೀಯ ಅನುಭವ ಪರೀಕ್ಷೆ ಮಾಡಬೇಕು.  ಸಿಎಂ ಹೋದಲ್ಲಿ ಬಲಿದಾನವಾಗುತ್ತಿದೆ ಎಂದರೆ ಸಿಎಂ ಪ್ರವಾಸ ಎಂಥದ್ದು ಯೋಚನೆ ಮಾಡಬೇಕು ಎಂದು  ಸಂಸದ ನಳೀನ್ ಕುಮಾರ್‍ ಕಟೀಲ್  ಉಡುಪಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾರು ಅಪಘಾತದಲ್ಲಿ ಮುಂಡಗೋಡು ಗ್ರಾಮ ಲೆಕ್ಕಾಧಿಕಾರಿ ಸ್ಥಳದಲ್ಲೇ ಸಾವು, ಮತ್ತಿಬರಿಗೆ ಗಾಯ
ಭಾರತೀಯರ ಕ್ರೇಜ್, ದುಬೈನ ಶಾರುಖ್ ಖಾನ್ ಆಫೀಸ್ ಟವರ್ ಬರೋಬ್ಬರಿ 5000 ಕೋಟಿ ರೂ ಗೆ ಮಾರಾಟ!