
ಲಕ್ನೊ (ಜ.07): ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾದ ನಂತರ ಉತ್ತರ ಪ್ರದೇಶವನ್ನು ಕೇಸರಿಮಯವನ್ನಾಗಿ ಮಾಡಲು ಹೊರಟಿದ್ದಾರಾ ಎನ್ನುವ ಪ್ರಶ್ನೆ ಹುಟ್ಟಿದೆ.
ಇತ್ತೀಚಿಗೆ ಹಜ್ ಕಚೇರಿಗೆ ಕೇಸರಿ ಬಣ್ಣವನ್ನು ಹೊಡೆಸಲು ಹೇಳಿದ್ದು ಸುದ್ಧಿಯಾಗಿತ್ತು. ಇದಾದ ಬಳಿಕ ಲಕ್ನೋದಲ್ಲಿರುವ 80 ವರ್ಷಗಳಷ್ಟು ಹಳೆಯದಾಗಿರುವ ಪೊಲೀಸ್ ಸ್ಟೇಷನ್'ಗೆ ಕೇಸರಿ ಬಣ್ಣವನ್ನು ಬಳಿಯುವಂತೆ ಆದೇಶಿಸಿದ್ದಾರೆ.
ಕೇಸರಿ ಬಣ್ಣ ನಿಧಾನವಾಗಿ ಎಲ್ಲವನ್ನು ಆವರಿಸಿಕೊಳ್ಳುತ್ತಿದೆ. ಬುಕ್'ಲೆಟ್, ಸ್ಕೂಲ್ ಬ್ಯಾಗ್ಸ್, ಟವೆಲ್, ಚೇರ್, ಬಸ್ ಹೀಗೆ ಎಲ್ಲವೂ ನಿಧಾನವಾಗಿ ಕೇಸರಿಮಯವಾಗುತ್ತಿದೆ. ಇದೀಗ ಪೊಲೀಸ್ ಸ್ಟೇಷನ್ ಕೂಡಾ ಕೇಸರಿಮಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.