ಕೇರಳದ ಮಹಾಮಳೆಯಲ್ಲಿ ಮುಳುಗಿದ ರಾಜ್ಯದ ಐರಾವತ

Aug 15, 2018, 8:50 PM IST

ಕಳೆದ ಒಂದು ವಾರದಿಂದ ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಎಲ್ಲೆಡೆ ನೀರು ತುಂಬಿಕೊಂಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಐರಾವತ ಬಸ್ ನೀರಿನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಮಳೆ ಆರ್ಭಟ ಕೇರಳದಲ್ಲಿ ಯಾವ ಪರಿಯಾಗಿದೆ ಎಂಬುದಕ್ಕೆ ಒಂದು ಉದಾಹರಣೆ ಇಲ್ಲಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಹರಸಾಹಸ ಮಾಡಿ  ಜೀವ ಉಳಿಸಿಕೊಂಡಿದ್ದಾರೆ. ಬಸ್ ಬೆಂಗಳೂರಿನಿಂದ ಕ್ಯಾಲಿಕಟ್‌ಗೆ ತೆರಳುತ್ತಿತ್ತು.